SEMINAR ON DISEASES

Held by SANJEEVINI eco club GHS talewad.

SBNN GOVT HIGH SCHOOL, TALEWAD

Our beatifu school with coverd lott of trees and garden.

INTERNATIONAL YOGA DAY

300 above students participated in this celebration.

PATIBHA KARANJI AT MULAWAD

Our students participated and won many events.

PRACTICAL IN ATL LAB

Our students participated in atal thinkaring lab.

Thursday, September 28, 2023

ವಾಲ್ಮೀಕಿಯಾದ ಕಿರಾತ ರತ್ನಾಕರ

 ವಾಲ್ಮೀಕಿಯಾದ ಕಿರಾತ ರತ್ನಾಕರ





ವೈವಿಧ್ಯ ಕಿರಾತ ಅಂದರೆ ಬೇಡ ಜಾತಿಯ ರತ್ನಾಕರ ಚ್ಯವನ ಋಷಿಯ ಮಗನಾಗಿದ್ದ. ಗಂಗಾ ತೀರದ ಕ್ರೌಂಚವೆಂಬ ದಟ್ಟಾರಣ್ಯದಲ್ಲಿ ತನ್ನ ಕುಟುಂಬದವರೊಂದಿಗೆ ಇವನು ವಾಸವಾಗಿದ್ದ. ಈ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳ ಬೇಟೆಯಾಡುವುದು ದಾರಿಹೋಕರನ್ನು ಕಾಡಿಸಿ ಪೀಡಿಸಿ ಅವರ ತಲೆ ಹೊಡೆದು ಅವರಲ್ಲಿದ್ದುದೆಲ್ಲವನ್ನು ಸುಲಿಗೆ ಮಾಡುವುದು, ವಿರೋಧಿಸಿದರೇ ಹತ್ಯೆ ಮಾಡುವುದು ಈ ಬೇಡನ ನಿತ್ಯದ ಕಾರ್ಯಕ್ರಮಾವಾಗಿತ್ತು. ಇವನ ಧೈರ್ಯ ಸಾಹಸ ಎಂತವರ ಗುಂಡುಗೆಯನ್ನು ಗಡಗಡ ನಡುಗುವಂತೆ ಮಾಡಿತ್ತು. ಈ ಕಾಯಕದಿಂದಲೇ ತನ್ನ ಸಂಸಾರದ ಬಂಡಿ ಸುಖವಾಗಿ ಸಾಗುತಿತ್ತು.

ಅದೊಂದು ದಿನ ಈ ಕಿರಾತ ಬೇಟೆಗಾಗಿ ಕಾಡಿಗೆ ಹೊರಟನು. ಅರಣ್ಯದಲ್ಲೆಲ್ಲ ತಿರುಗಾಡಿದರೂ ಒಂದು ಬೇಟೆಯೂ ಇವನಿಗೆ ಸಿಗಲಿಲ್ಲ. ಅಗ ದಟ್ಟಾರಣ್ಯದ ದಾರಿಯಲ್ಲಿ ಸಪ್ತರ್ಷಿಗಳ ಗುಂಪಿನ ದರ್ಶನವಾಯಿತು. ಅವರಲ್ಲಿರುವ ವಸ್ತುಗಳನ್ನು ಕೊಡುವಂತೆ ಪೀಡಿಸಿದ ಕಿರಾತ. ನೋಡು ಕಿರಾತ ಕುಟುಂಬದ ಪೋಷಣೆ ಮಾಡುವುದು ಗೃಹಸ್ಥನ ಕರ್ತವ್ಯವೆಂಬುದೇನೋ ನಿಜ.

ಆದರೆ ಮುಗ್ದ ಜನರನ್ನು ಹಿಂಸಿಸಿ ಅವರ ಕೊಲೆ ಸುಲಿಗೆ ಮಾಡಿ ನೀನು ದ್ರವ್ಯಾರ್ಜನೆ ಮಾಡುವುದು ಮಹಾ ಪಾಪಕರ ಕೆಲಸ ಪರರನ್ನು ಹಿಂಸಿಸದೇ ಸತ್ಯದ ಹಾದಿಯಲ್ಲಿ ನಡೆದು ದುಡಿತದ ಶ್ರಮದಿಂದ ಉಪ ಜೀವನ ನಡೆಸಿದರೆ ನಿನಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಕೆಟ್ಟ ಕೆಲಸ ಮಾಡುವುದನ್ನು ಬಿಟ್ಟು ಪುಣ್ಯದ ಹಾದಿಯಲ್ಲಿ ಇಂದಿನಿಂದಲೇ ನೀನು ಸಾಗು. ನಿನ್ನ ತಂದೆ ತಾಯಿ ಹೆಂಡತಿ ಮಕ್ಕಳು ಇವರ್ಯಾರೂ ನಿನ್ನ ಪಾಪದಲ್ಲಿ ಪಾಲುದಾರರಾಗುವುದಿಲ್ಲ ಎಂದು ಸಪ್ತರ್ಷಿಗಳು ಬುದ್ದಿವಾದ ಹೇಳಿದರು. ನಮ್ಮ ಬಳಿ ಪವಿತ್ರಗೊಳಿಸುವ ರಾಮನಾಮವಿದೆ. ಈ ರಾಮನಾಮ-ತೀರ್ಥಗಳು, ಬೆಳ್ಳಿ-ಬಂಗಾರದ ಒಡವೆಗಳಲ್ಲಿ . ನಿನ್ನ ಪಾಪದ ರಾಶಿಯನ್ನು ನಾಶ ಮಾಡುವಂತಹ ಅಮೋಘ ಸಾಧನಗಳಿವು. ಇವುಗಳನ್ನು ನಮ್ಮಿಂದ ಸ್ವೀಕರಿಸಿದರೇ ಮಾತ್ರ ನೀನು ಪಾಪದಿಂದ ಮುಕ್ತಿ ಹೊಂದಿ ಉದ್ದಾರವಾಗುವೆ. ಈಗ ನೀನು ಪಕ್ಕದ ಗಂಗೆಯಲ್ಲಿ ಮಿಂದು ಬಾ ಹೋಗು ಎಂದರು ಸಪ್ತರ್ಷಿಗಳು. ಭಕ್ತಿ ಭಾವದಿಂದ ಸಪ್ತರ್ಷಿಗಳ ಸ್ಮರಣೆ ಮಾಡುತ್ತಾ ಗಂಗೆ ಕಡೆಗೆ ಕಿರಾತನಿಗೆ ಕಮಂಡಲದೊಲಗಿನ ತೀರ್ಥ ಕೊಟ್ಟು ಪಾವನಕರವಾದ ರಾಮನಾಮವನ್ನು ಉಪದೇಶಿಸಿದರು.

ನೋಡು ಕಿರಾತ ನೀನು ಪಾಪವನ್ನು ನಾಶಗೊಳಿಸುವಂಥ ಪಾವನಕರ ರಾಮನಾಮವನ್ನು ಜಪಿಸುತ್ತ ಕುಳಿತುಕೋ. ಮನಸ್ಸನ್ನು ಅತ್ತಿತ್ತ ಹರಿದಾಡಗೊಡಗಬೇಡ. ತಂದೆ-ತಾಯಿ, ಹೆಂಡತಿ-ಮಕ್ಕಳ ವ್ಯಾಮೋಹಕ್ಕೆ ಒಳಗಾಗಬೇಡ. ನೀನು ನಮ್ಮಂತೆ ರಾಮನಾಮದ ತಪಸ್ಸನ್ನಾಚರಿಸಿದರೆ ನಿನ್ನ ಪಾಪರಾಶಿಯು ನಾಶವಾಗಿ ನಮ್ಮಂತೆ ತಪಸ್ವಿಯಾಗುವೆ. ಇವರ ಉಪದೇಶ, ಆಶೀರ್ವಾದ ಪಡೆದು ಕಿರಾತ ಹರ್ಷಿತನಾದ ಅಲ್ಲಿಯೇ ಮರದಡಿಯಲ್ಲಿ ಕುಳಿತು ಏಕಚಿತ್ತದಿಂದ ರಾಮ-ರಾಮ ಎಂದು ಪರಮಾತ್ಮನ ನಾಮಸ್ಮರಣೆ ಮಾಡತೊಡಗಿದನು.

ಹಗಲು ರಾತ್ರಿ ಕೆವಲ ರಾಮನಾಮ ಜಪದಲ್ಲಿ ನಿರತನಾದ ಕಿರಾತ ಧ್ಯಾನದಲ್ಲಿ ಮೈಮರೆತ ಇವನ ಮೇಲೆ ದೊಡ್ಡ ಹುತ್ತವೇ ಬೆಳೆಯಿತು. ಆನೇಕ ವರ್ಷಗಳ ನಂತರ ಸಪ್ತರ್ಷಿಗಳು ಮತ್ತೇ ಅದೇ ಅರಣ್ಯದ ಮಾರ್ಗದಲ್ಲಿಯೇ ಬಂದಾಗ ಹಿಂದೆ ತಾವು ಉಪದೇಶಿಸಿದ್ದ ಕಿರಾತನ (ಬೇಡ) ನೆನಪಾಯಿತು. ಸಪ್ತರ್ಷಿಗಳು ಏ ಕಿರಾತ ಎಂದು ಜೋರಗಿ ಕೂಗಿದರು. ಇವರ ಕೂಗನ್ನು ಕೇಳಿ ಧ್ಯಾನದಿಂದ ಎಚ್ಚರಗೊಂಡ ಕಿರಾತ ಹುತ್ತವನ್ನು ಒಡೆದುಕೊಂಡು ಹೊರ ಬಂದನು. ಇವನನ್ನು ಕಂಡ ಸಪ್ತರ್ಷಿಗಳು ಹರ್ಷಗೊಂಡು ನಿಂತು ಕೈಗಳನ್ನೆತ್ತಿ ಆಶೀರ್ವದಿಸಿದರು. ಕಿರಾತನು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕೈ ಜೋಡಿಸಿ ಪ್ರಾರ್ಥಿಸತೊಡಗಿದನು. ಸಪ್ತರ್ಷಿಗಳು ಪರಮಾನಂದದಿಂದ ನೀನು ಮೈಮೇಲೆ ವಲ್ಮೀಕ ಬೆಳೆಯುವವರೆಗೂ ತಪಶ್ಚರ್ಯ ಮಾಡಿದ್ದರಿಂದ ನಿನಗೆ ಲೋಕದಲ್ಲಿ ವಾಲ್ಮೀಕಿ ಎಂಬ ಹೆಸರಿನಿಂದ ನಾಮಕರಣ ಮಾಡಿರುವೆವು, ನಿನ್ನ ಪರ್ವತಪ್ರಾಯವದ ಪಾಪರಾಶಿಯೆಲ್ಲವೂ ರಾಮಮಂತ್ರ ಜಪದಿಂದ ನಾಶವಾಗಿ ಅಮೋಘವಾದ ಪುಣ್ಯ ಸಂಚಯ ಮಾಡಿಕೊಂಡಿರುವೆ ನೀನು ಪರಮಜ್ಞಾನಿಯಾದ ಮಹರ್ಷಿಯಾಗುವೆ. ನಿನ್ನಿಂದ ಲೋಕಕಲ್ಯಾಣವಾದ ಕಾರ್ಯವಾಗಲಿ. ವಾಲ್ಮೀಕಿ ಮಹರ್ಷಿಯೇ ನೀನು ವಿಧಿವಸದಿಂದ ಕಿರಾತನಾಗಿ ಜನಿಸಿ ಅದೇ ಸಂಸ್ಕಾರದಿಂದ ಕುಕರ್ಮವನ್ನಾಚರಿಸಿದೆ. ಅದರೆ ಪರಿಪಕ್ವ ಕಾವೊದಗಿದೊಡನೆಯೇ ನಿನಗೆ ನಮ್ಮ ದರ್ಶನವಾಯಿತು. ನೀನು ವಿದ್ಯಾದಾನ ಮಾಡು ಮುಂದೆ ನಿನಗೆ ನಾರದ ಮಹರ್ಷಿಗಳು ಭೇಟಿಯಾಗುವರು ಅವರ ಆಜ್ಞೆಯಂತೆ ನೀನು ನಡೆಯಬೇಕು ಎಂದು ಆಶೀರ್ವದಿಸಿದರು. ಸಪ್ತರ್ಷಿಗಳ ಆಶೀರ್ವಚನದಿಂದ ವಾಲ್ಮೀಕಿ ಋಷಿಯು ಸಂತುಷ್ಠನಾದನು. ಭಕ್ತಿ ವಿನಯದಿಂದ ಸಪ್ತರ್ಷಿಗಳು ಕುರಿತು ಮಹಾತ್ಮರೇ ನಿಮ್ಮಂದಲೇ ನಾನು ಪುನರ್ಜನ್ಮ ಪಡೆದಿರುವೆ ದುಷ್ಟನಾಗಿದ್ದ ನನ್ನನ್ನು ನೀವು ಉದ್ದರಿಸಿದಿರಿ ನಿಮ್ಮ ಉಪಕರವನ್ನು ನಾನೆಂದು ಮರೆಯಲಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ವಾಲ್ಮೀಕಿ ಮಹರ್ಷಿಯೇ ನಾವು ನಿಮಿತ್ತ ಮಾತ್ರರು. ನಿನ್ನನ್ನು ನೀನೇ ಉದ್ದರಿಸಿಕೊಂಡೆ ಏಕನಿಷ್ಠಿಯಿಂದ ರಾಮ ಮಂತ್ರ ಪುರಸ್ಚರನ ಮಾಡಿ ಪಾವನನಾದೆ, ಸರ್ವಸಂಗ ಪರಿತ್ಯಾಗ ಮಾಡಿ ಮನೋನಿಗ್ರಹಗಳಿಂದ ಯೋಗರುಢನಾಗಿ ಮೈಮೇಲೆ ವಲ್ಮೀಕಿ (ಹುತ್ತ) ಬೆಳೆಯುವವರೆಗೆ ಮಾಡಿದ ತಪಸ್ಸು ಸಾಮನ್ಯವಾದುದಲ್ಲ ನಿನ್ನ ನಿಷ್ಠೆಯೇ ನಿನ್ನನ್ನು ಉದ್ದರಿಸಿದೆ. ನೀನು ಪುರಸ್ಚರಣ ಮಾಡಿದ ರಾಮಮಂತ್ರದ ಮಹಿಮೆಯನ್ನು ಚೆನ್ನಾಗಿ ಅರಿತಿರುವೆ ಮುಂದೆ ದೇವರ್ಷಿ ನಾರದರು ಮಹಾಮಹಿಮನಾದ ರಾಮನ ಚರಿತ್ರೆಯನ್ನು ನಿನಗೆ ತಿಳಿಸುವರು ಶ್ರೀ ರಾಮ ಚರಿತೆಯ ಶ್ರವಣದಿಂದ ನಿನಗೆ ಒಳ್ಳೆಯ ಪ್ರಯೋಜನವಾಗುವುದೆಂದು ಶುಭಾಶೀರ್ವದಿಸಿದರು.

ಸಪ್ತಷಿಗಳ ಅದೇಶದಂತೆ ನಾರದಮುನಿಗಳು ವಾಲ್ಮಿಕಿ ಮಹರ್ಷಿಯ ಆಶ್ರಮಕ್ಕೆ ಭೇಟಿ ಕೊಟ್ಟರು. ಸಜ್ಜನರ ರಕ್ಷಣೆಗೆ ಮತ್ತು ದುರ್ಜನರ ನಾಶಕ್ಕಾಗಿ ಈ ಭೂಮಿಯಲ್ಲಿ ಅವತರಿಸಿದ ಶ್ರೀರಾಮ ಚರಿತ್ರೆಯನ್ನು ಬರೆಯುವಂತೆ ನಾರದಮುನಿಗಳು ತಿಳಿಸಿದರು. ಒಮ್ಮೆ ಶಿಷ್ಯನೊಂದಿಗೆ ಗಂಗಾ ಸ್ನಾನಕ್ಕೆ ಹೊರಟ ವಾಲ್ಮೀಕಿಗೆ ಸರಸಸಲ್ಲಾಪದಲ್ಲಿದ್ದ ಕ್ರೌಂಚ ಪಕ್ಷಿ ದಂಪತಿಯನ್ನು ನೋಡಿದರು. ಅವರ ಕಣ್ಣಿದುರಿಗೆ ಬೇಡನ ಬಾಣಕ್ಕೆ ಬಲಿಯಾದ ಗಂಡು ಕ್ರೌಂಚ ಪಕ್ಷಿ ಕಂಡು ಮರುಗಿದ ವಾಲ್ಮೀಕಿ ಈ ಪಕ್ಷಿಯ ಸಾವಿಗೆ ಕಾರಣನಾದ ಬೇಡನಿಗೆ ಎಂದು ಏಳಿಗೆಯಾಗದಿರಲೆಂದು ಶಾಪ ಕೊಟ್ಟರು. ನಂತರ ಬೇಡ ತನ್ನ ಕಾಯಕದ ಬಗ್ಗೆ ವಾಲ್ಮೀಕಿಗೆ ಮನವರಿಕೆ ಮಾಡಿಕೊಟ್ಟಾಗ ಸತ್ಯ ತಿಳಿಯದೇ ಶಾಪ ಕೊಟ್ಟದ್ದು ತಪ್ಪಾಯಿತೆಂದು ವಾಲ್ಮೀಕಿ ಋಷಿಯೂ ಪಶ್ಚಾತ್ತಾಪ ಪಟ್ಟು ಮನಶಾಂತಿಗಾಗಿ ಪರಮಾತ್ಮನ ದರ್ಶನಕ್ಕೆ ತಪಶ್ಚರ್ಯ ಮಾಡಿದರು. ತಪಸ್ಸಿಗೆ ಲೋಕಕರ್ತನಾದ ಬ್ರಹ್ಮದೇವನು ಮೆಚ್ಚಿ ಇವನ ತಪೋವನಕ್ಕೆ ದರ್ಶನವಿತ್ತನು.

ಆಗ ಪರಮಾತ್ಮನು ವಾಲ್ಮೀಕಿಯನ್ನು ಕುರಿತು ಪುಣ್ಯ ಶ್ಲೋಕಿಯಾದ ಮಹರ್ಷಿಯೇ ನಿನ್ನಿಂದ ಲೋಕಕಲ್ಯಾಣ ಮಹಾಕಾರ್ಯವು ಜರುಗಬೇಕಾಗಿದೆ. ಅದಕ್ಕಾಗಿಯೇ ಕ್ರೌಂಚವಧೆಯ ಘಟನೆಯು ನಿನ್ನ ಕಣ್ಮಂದೆ ನಡೆಯಿತು. ದೇವರ್ಷಿ ನಾರದರು ಕೇಳಿದ ಶ್ರೀರಾಮ ಚರಿತೆಯು ನಿನಗೆ ಪೂರ್ಣವಾಗಿ ಕರಗತವಾಗಿದೆ. ಈ ಪುಣ್ಯಪುರುಷನ ಚರಿತ್ರೆಯನ್ನು ನೀನು ಕಾವ್ಯರೂಪದಲ್ಲಿ ಬರೆಯಬೇಕು ಪೃಥ್ವಿಯಲ್ಲಿ ಎಲ್ಲಿಯವರೆಗೆ ಗಿರಿಶಿಖರಗಳು, ನದಿ ಸಮುದ್ರಗಳಿರುವವೋ ಅಲ್ಲಿಯವರೆಗೆ ಈ ಲೋಕದಲ್ಲಿ ರಾಮಾಯನ ಕಥೆಯು ಪ್ರಚಲಿತವಾಗಿರುತ್ತದೆ. ನಿನ್ನ ಶ್ರೀರಾಮಚರಿತ ಮಹಾಕಾವ್ಯದ ದಿವ್ಯಕೃತಿಯಿಂದ ಲೋಕೋಪಕಾರವಾಗುವುದು. ನಿನ್ನ ಕಾವ್ಯವು ತನ್ನ ಘನತೆಯಿಂದ ವೇದ ಪಟ್ಟಕ್ಕೇರುವುದು, ಕಾವ್ಯ ರಚನೆಯ ಕಾರ್ಯದಲ್ಲಿ ನೀನೇ ಮೊದಲಿಗನಾಗುವುದರಿಂದ ಆದಿಕವಿ ಎಂಬ ಖ್ಯಾತಿ ಕೂಡ ನಿನಗೆ ಸಲ್ಲತ್ತದೆ ಎಂದ ಬ್ರಹ್ಮದೇವ ವಾಲ್ಮೀಕಿ ಮಹರ್ಷಿಯೇ ಉಪದೇಶ ಮಾಡಿ ಕಣ್ಮರೆ ಹೊಂದಿದನು. ಮರು ಕ್ಷಣವೇ ಮಹರ್ಷಿಯಲ್ಲಿ ರಾಮಾಯಣ ಕಾವ್ಯ ರಚನೆಯ ಸ್ಪೂರ್ತಿಯ ಉದಯವಾಯಿತು.

ವಾಲ್ಮೀಕಿ ಮಹರ್ಷಿ ಪಾವನಕರವಾದ ಶ್ರೀರಾಮಚರಿತೆಯನ್ನು ಕಾವ್ಯರೂಪದಲ್ಲಿ ಶ್ರೀರಾಮ ಜನನದಿಂದ ಹಿಡಿದು ಅವನ ಪಟ್ಟಾಭೀಷೇಕದವರೆಗೆ ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ದಕಾಂಡಗಳೆಂಬ ಆರು ಕಾಂಡಗಲಲ್ಲಿ ಶ್ರೀರಾಮ ಚರಿತೆಯನ್ನು ರಚಿಸಿ ಹಾಡಿದ್ದಾನೆ. ಇದನ್ನೇ ನಾವು ವಾಲ್ಮೀಕಿ ವಿರಚಿರ ರಾಮಾಯಣವೆಮದು ಕರೆಯುತ್ತೇವೆ.

ಆದಿಕವಿ ಮಹರ್ಷಿ ವಾಲ್ಮೀಕಿ ಕೇವಲ ವಾಲ್ಮೀಕಿ ನಾಯಕ ಜನಾಂಗದ ಸ್ವತ್ತಲ್ಲ. ಅವರೊಬ್ಬ ಪುಣ್ಯಪುರುಷರಾಗಿದ್ದಾರೆ. ಬೇಟೆಗಾರ, ದರೋಡೆಕೋರ ಪರಾವಲಂಬಿಯಾಗಿದ್ದ ಕಿರಾತ ರತ್ನಾಕರ ಸಪ್ತರ್ಷಿಗಳ ಉಪದೇಶದಿಂದ ಜ್ಞಾನೋದಯವಾಗಿ ರಾಮನಾಮ ಜಪಿಸಿ ಮಹರ್ಷಿ ವಾಲ್ಮೀಕಿಯಾಗಿ ಜಗತ್ಪ್ರಸಿದ್ದ ರಾಮಾಯಾಣ ರಚಿಸಿ ಆದಿಕವಿಯಾದ. ಇವರ ರಾಮಾಯಣ ಮಹಾಕಾವ್ಯ ಇಡೀ ಜಗತ್ತಿಗೆ ದಾರಿದೀಪವಾಗಿದೆ ಎವರ ವಿಚಾರಧಾರೆಗಳು ಇಂದಿನ ತಪ್ಪು ದಾರಿ ತುಳಿಉವ ಪ್ರತಿಯೊಬ್ಬರಿಗೆ ದಾರಿದೀಪವಾಗಬೇಕು. ಇವರ ಚಿಂತನೆಗಳು ಜನ ಸಾಮಾನ್ಯರ ಮನ ತಲುಪಿ ಸನ್ಮಾರ್ಗದಲ್ಲಿ ನಡೆಯಬೇಕು.

ಸಮಾಜದ ಕೆಳ ವರ್ಗದಲ್ಲಿ ಜನಿಸಿದ ಎಷ್ಟೋ ವ್ಯಕ್ತಿಗಳು ಅವರ ಸಾಧನೆಯಿಂದ ಉತ್ತುಂಗಕ್ಕೇರಿ ಇತಿಹಾಸದ ಪುಟಗಳಲ್ಲಿ ಅಜರಾಮರರಾಗಿದ್ದಾರೆ. ಯಾವುದೇ ವ್ಯಕ್ತಿಯನ್ನು ಅವನ ಹುಟ್ಟಿನ ಜಾತಿಯಿಂದ, ಉದ್ಯೋಗದಿಂದ, ನಡುವಳಿಕೆಯಿಂದ, ಪರಿಸರದಿಂದ, ಅಳೆಯುವುದು ಕಷ್ಟವೆನಿಸುತ್ತದೆ. ಯಾವ ಜಾತಿಯವನೆ ಇರಲಿ, ಅವನಿಗೆ ಸತ್ಯದ ಹಾದಿಯಲ್ಲಿ ಕೊಂಡೊಯ್ಯುವ ಉತ್ತಮ ಸಂಸ್ಕಾರ, ಒಳ್ಳೆಯ ಪರಿಸರ, ವಿದ್ಯೆ ಬುದ್ದಿ, ಗುರು ದೀಕ್ಷೆ, ಮಾರ್ಗದರ್ಶನ ಸಿಕ್ಕಿದ್ದೇಯಾದರೆ ಅವನು ಏನೆಲ್ಲ ಸಾಧಿಸಿ ತೋರಿಸುವುದರೊಂದಿಗೆ ಜನಮನದಲ್ಲಿ ಅಚ್ಚಳಿಯದೇ ಶಾಶ್ವತವಾಗಿ ಉಳಿಯಬಲ್ಲ ಎನ್ನುವುದಕ್ಕೆ ಬೇಡರ ಜಾತಿಯಲ್ಲಿ ಹುಟ್ಟಿದ ಕಿರಾತ ರತ್ನಾಕರ ಅಂದರೆ ವಾಲ್ಮೀಕಿ ಮಹರ್ಷಿಯೇ ನಿದರ್ಶನರಾಗಿದ್ದಾರೆ.

ಪೌರಾಣಿಕ ಕಥೆಗಳು – ರತ್ನಾಕರನು ವಾಲ್ಮೀಕಿ ಆಗಿ ರೂಪಾಂತರಗೊಂಡ ಕಥೆ





ಪವಿತ್ರ ಮಹಾಕಾವ್ಯವಾದ ರಾಮಾಯಣದ ಲೇಖಕ, ವಾಲ್ಮೀಕಿ. ಇವರು ಮಹರ್ಷಿಯಾದ ಕಥೆ, ಇವರೇ ರಚಿಸಿದ ಮಹಾಕಾವ್ಯದಷ್ಟೆ ಕುತೂಹಲಕಾರಿ ಆಗಿದೆ.

ವಾಲ್ಮೀಕಿ, ಪ್ರಚೇತಸ ಎಂಬ ಋಷಿಯ ಮಗನಾಗಿ ಜನಿಸಿದರು. ಆಗ ಆ ಬಾಲಕನ ಹೆಸರು ರತ್ನಾಕರ ಎಂದಾಗಿತ್ತು. ಈ ಚಿಕ್ಕ ಹುಡುಗನಾದ ರತ್ನಾಕರ ಒಮ್ಮೆ ದಟ್ಟ ಅರಣ್ಯದಲ್ಲಿ ಹೊಕ್ಕಿ ದಾರಿ ತಪ್ಪಿದನು. ಒಬ್ಬ ಬೇಟೆಗಾರ ಈ ಬಾಲಕನನ್ನು ಕಂಡು ತನ್ನಡಿ ಆಶ್ರಯ ನೀಡಿದನು. ಸಾಕು ತಂದೆ-ತಾಯಿಯ ಪ್ರೀತಿ ಮತ್ತು ವಾತ್ಸಲ್ಯದಲ್ಲಿ, ರತ್ನಾಕರ ಶೀಘ್ರದಲ್ಲೇ ತನ್ನ ಹೆತ್ತವರನ್ನು ಮರೆತುಹೋದ. ನಂತರ ರತ್ನಾಕರನು ಅತ್ಯುತ್ತಮ ಬೇಟೆಗಾರನಾಗಿ ಬೆಳೆದನು. ಮದುವೆಯಾಗಬಲ್ಲ ವಯಸ್ಸು ಸಮೀಪಿಸುತ್ತಿದ್ದಂತೆ, ಅಲ್ಲೇ ಒಂದು ಬೇಟೆಗಾರರ ಕುಟುಂಬದ ಸುಂದರ ಯುವತಿಯೊಂದಿಗೆ ವಿವಾಹವಾದನು.

ರತ್ನಾಕರನ ಕುಟುಂಬ ದೊಡ್ಡದಾಗಿ ಬೆಳೆಯುತ್ತಾ ಹೋದಂತೆ ಎಲ್ಲರಿಗೂ ಆಹಾರ ಒದಗಿಸುವುದು ಆತನಿಗೆ ಕಷ್ಟವಾಯಿತು. ಬೇಸತ್ತು ಆತನು ಅಂತಿಮವಾಗಿ ಕಾಡಿನಲ್ಲಿ ಹಾದುಹೋಗುವ ಜನರನ್ನು ಲೂಟಿ ಮಾಡಿ, ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಆರಂಭಿಸಿದ.

ಒಂದು ದಿನ, ನಾರದ ಮುನಿ ಈ ಕಾಡಿನಲ್ಲಿ ಹಾದು ಹೋಗುವಾಗ ರತ್ನಾಕರನ ದಾಳಿಗೆ ಒಳಪಟ್ಟರು. ನಾರದ ಭಯ ಪಡದೆ, ತನ್ನ ವೀಣೆ ಹಿಡಿದು ದೇವರ ಗುಣಗಾನ ಮಾಡಿ ಹಾಡುತ್ತಿರುವುದನ್ನು ಕಂಡು ಒಂದು ಗೋಚರವಾದ ಪರಿವರ್ತನೆ ರತ್ನಾಕರನಲ್ಲಿ ಆಗ ತೊಡಗಿತು. ನಾರದ ಅವರಿಗೆ ‘ರಾಮ’ ನಾಮದ ಪವಿತ್ರ ಹೆಸರು ಕಲಿಸಿದರು. ಅವರು ಮರಳಿ ಬರುವ ತನಕ ಆ ಹೆಸರನ್ನು ಪಠಣ ಮಾಡುತ್ತ ಧ್ಯಾನ ಮಾಡುವಂತೆ ಕೇಳಿಕೊಂಡರು. ರತ್ನಾಕರ ಇದನ್ನು ಪಾಲಿಸಿದರು. ತನ್ನ ಇಡೀ ದೇಹ ಹುತ್ತದೊಳಗೆ ಮುಳುಗಿದರೂ ರತ್ನಾಕರ ಧ್ಯಾನದಲ್ಲಿ ತಲ್ಲೀನನಾಗಿದ್ದ. ವರ್ಷಗಳು ಕಳೆದ ನಂತರ ನಾರದ ಮುನಿ ಮರಳಿದರು. ಆತನ ದೇಹದ ಸುತ್ತಾ ಇದ್ದ ಹುತ್ತ ತೆಗೆದುಹಾಕಿದರು. ಆತನ ತಪಸ್ಸನ್ನು ಮೆಚ್ಚಿದ ಬ್ರಹ್ಮರ್ಷಿ, ಗೌರವಾರ್ಥವಾಗಿ ದಯಪಾಲಿಸಲ್ಪಟ್ಟ ಹೆಸರೇ, ವಾಲ್ಮೀಕಿ. ಇದರ ಮೂಲ ‘ವಾಲ್ಮೀಕ’ವಾಗಿದ್ದು, ಅದರ ಅರ್ಥ ಹುತ್ತ ಎಂದಾಗಿದೆ.

ಬ್ರಹ್ಮರ್ಷಿ ವಾಲ್ಮೀಕಿ ನಂತರ ಗಂಗಾ ನದಿಯ ತೀರದಲ್ಲಿ ತಮ್ಮ ಆಶ್ರಮವನ್ನು ನಿರ್ಮಿಸಿದರು. ಹಾಗೆ ಒಂದು ದಿನ ನಾರದ ಮುನಿಗಳು ಅವರ ಆಶ್ರಮಕ್ಕೆ ಭೇಟಿ ನೀಡಿ ಅವರಿಗೆ ಶ್ರೀ ರಾಮನ ಕಥೆಯನ್ನು ತಿಳಿಸಿದರು. ನಂತರ, ವಾಲ್ಮೀಕಿ ಬ್ರಹ್ಮ ದೇವನಿಂದ ದಿವ್ಯ ದೃಷ್ಟಿ ಪಡೆದು, ರಾಮಾಯಣದ ಕಥೆಯನ್ನು ತಿಳಿಸತೊಡಗಿದರು, ಇದನ್ನು ಪರಿಪಾಲಿಸುತ್ತ ವಾಲ್ಮೀಕಿ ಪ್ರೇರಣೆ ಪಡೆದು ಸುಲಭವಾಗಿ ಶ್ಲೋಕಗಳನ್ನು ರಚಿಸುತ್ತ, ನಮಗೆಲ್ಲಾ ರಾಮಾಯಣವನ್ನು ನೀಡಿದರು.

ವಿಶ್ವ ಶಿಕ್ಷಕರ ದಿನಾಚರಣೆ

 


1994ರಿಂದ ಅಕ್ಟೋಬರ್‌ 5 ರಂದು ವಿಶ್ವ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಶಿಕ್ಷಕರಿಗೆ ಬೆಂಬಲ ನೀಡುವುದೇ ಇದರ ಹಿಂದಿನ ಉದ್ದೇಶ ಹಾಗೂ ಭವಿಷ್ಯದ ಪೀಳಿಗೆಗೆ ಕೂಡ ಶಿಕ್ಷಕರ ಅಗತ್ಯವಿರುವುದನ್ನು ತಿಳಿಯಪಡಿಸುವುದಕ್ಕಾಗಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.

ಯುನೆಸ್ಕೋ ಪ್ರಕಾರ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಟ್ಟು ಅವರ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಶಿಕ್ಷಕರ ಈ ಸೇವೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ವಿಶ್ವ ಶಿಕ್ಷಕರ ದಿನದ ಆಚರಣೆಯ ಉದ್ದೇಶವಾಗಿದೆ. ವಿಶ್ವ ಶಿಕ್ಷಕರ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗುತ್ತದೆ ಹಾಗೂ ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.

ವಿಶ್ವ ಶಿಕ್ಷಕರ ದಿನಾಚರಣೆಯ ಬಗ್ಗೆ ಎಜುಕೇಷನ್‌ ಇಂಟರ್‌ನ್ಯಾಷನಲ್‌ಗೆ ಬಲವಾದ ನಂಬಿಕೆ ಇದೆ. ಶಿಕ್ಷಕರ ದಿನವು ಅಂತಾರಾಷ್ಟ್ರೀಯಮಟ್ಟದಲ್ಲಿ ಗುರುತಿಸಲ್ಪಡಬೇಕು ಹಾಗೂ ಜಗತ್ತಿನಾದ್ಯಂತ ಆಚರಣೆ ಮಾಡಬೇಕೆಂಬುದು ಎಜುಕೇಷನ್‌ ಇಂಟರ್‌ನ್ಯಾಷನಲ್‌ ಬಯಕೆಯಾಗಿದೆ.

ಭವಿಷ್ಯದ ಪೀಳಿಗೆಗೆ ಶಿಕ್ಷಣ ನೀಡುವ ಜವಾಬ್ದಾರಿಯು ಸಾಮಾನ್ಯವಾದುದಲ್ಲ. ಆದ್ದರಿಂದ ಇಂಥ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿರುವ ಶಿಕ್ಷಕರನ್ನು ವಿಶ್ವ ಶಿಕ್ಷಕರ ದಿನಾಚರಣೆಯಂದು ಮಾತ್ರ ಸ್ಮರಿಸುವುದಲ್ಲ. ವರ್ಷ ಪೂರ್ತಿ ನೆನಪಿಸಿಕೊಳ್ಳಬೇಕು.

ಕರ್ನಾಟದ ಏಕೀಕರಣ

 

ಮೈಸೂರು ಕರ್ನಾಟಕವಾದ ಕಥೆ
ಇವತ್ತು ಯಾವುದನ್ನು ನಾವು ವಿಶಾಲ ಕರ್ನಾಟಕ, ಅಖಂಡ ಕರ್ನಾಟಕ ಎಂದು ಕರೆಯುತ್ತೇವೆಯೋ ಅದು ಆರು ದಶಕಗಳ ಹಿಂದೆ ಸುಮಾರು 20 ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಕನ್ನಡಿಗರ ಒಂದು ಪ್ರತ್ಯೇಕ ರಾಜ್ಯವೆಂಬುದು ಅಸ್ತಿತ್ವದಲ್ಲೇ ಇರಲಿಲ್ಲ ಎಂದರೆ ಅಚ್ಚರಿಯಾಗುತ್ತಿದೆಯೇ? ಸ್ವಂತ ರಾಜ್ಯ ಹೊಂದುವ ಕನಸು ಮೊಳೆತು, ಚಿಗುರಿ, ಹಬ್ಬಿ, ಹೂವಾಗಿ, ಕಾಯಾಗಿ, ಹಣ್ಣಾದ ಘಟನೆಗಳ ಹಿಂದಿನ ಸಂಕ್ಷಿಪ್ತ ಚಿತ್ರಣ ಇಲ್ಲಿದೆ:

ಅದೊಂದು ಸಮೃದ್ಧ ಕನಸು
ಕನ್ನಡ ಮಾತನಾಡುವ ಜನರೆಲ್ಲ ಒಂದೇ ಪ್ರದೇಶಕ್ಕೆ ಸೇರಬೇಕೆಂಬ ಕನಸು ಮೊಳೆತಾಗ ಇದು ನಮ್ಮ ನೆಲ ಎಂದು ಹೇಳಿಕೊಳ್ಳಲು ಮೈಸೂರು ಸಂಸ್ಥಾನ ಹೊರತುಪಡಿಸಿ ಬೇರೆ ನಿರ್ದಿಷ್ಟ ಪ್ರದೇಶವೇ ಇದ್ದಿಲ್ಲ. ಉಳಿದ ಪ್ರಾಂತ್ಯಗಳ ಆಡಳಿತದಲ್ಲಿ ಕನ್ನಡ, ಕನ್ನಡಿಗರಿಗೆ ಪ್ರಾಧಾನ್ಯತೆ ಇರಲಿಲ್ಲ.

ಈ ಸಂದರ್ಭದಲ್ಲಿ ಕನ್ನಡದ ಪರವಾಗಿ ಕೆಲಸ ಮಾಡಿದ ಕೆಲ ಮಹನೀಯರನ್ನು ನೆನೆಯಲೇಬೇಕು. ಸರ್ ವಾಲ್ಟರ್ ಎಲಿಯಟ್, ಸರ್ ಥಾಮಸ್ ಮನ್ರೋ, ಜಾನ್ ಎ. ಡನ್‌ಲಪ್, ಗ್ರೀನ್ ಹಿಲ್ ಆರ್. ಗ್ರಾಂಟ್, ಡಬ್ಲ್ಯು. ಎ. ರಸೆಲ್, ಜೆ. ಎಫ್. ಫ್ಲೀಟ್‌ರಂತಹ ಬ್ರಿಟಿಷ್ ಅಧಿಕಾರಿಗಳು ಕನ್ನಡ ಕಟ್ಟುವ ಕೆಲಸ ಮಾಡಿದರು. ಅವರಿಗೆ ಕೈ ಜೋಡಿಸಿದ್ದು ಚೆನ್ನಬಸಪ್ಪನವರಂತಹ ಕನ್ನಡಿಗ ಅಧಿಕಾರಿ. ಜೊತೆಗೆ, ರಾ. ಹ. ದೇಶಪಾಂಡೆ, ರೊದ್ದ ಶ್ರೀನಿವಾಸರಾವ್, ಆಲೂರು ವೆಂಕಟರಾವ್ ಮುಂತಾದ ಹಿರಿಯರು ಕನ್ನಡ ಮಾತನಾಡುವ ಜನರೆಲ್ಲರನ್ನೂ ಹೊಂದಿರುವ ಒಂದು ಪ್ರಾಂತ್ಯ ರಚನೆಯಾಗಬೇಕೆಂದು ಕನಸು ಕಂಡರು. 

ಕರ್ನಾಟಕ ಏಕೀಕರಣದ ಕನಸು ಮೊಳೆತಿದ್ದು ಹೀಗೆ. ಜೊತೆಗೆ, ಇಂಥದೊಂದು ಕನಸು ಮೊಳೆಯಲು ಕೆಲ ಐತಿಹಾಸಿಕ ಘಟನೆಗಳೂ ಕಾರಣವಾಗಿವೆ.

1905ರಲ್ಲಿ ಬ್ರಿಟಿಷ್ ಸರ್ಕಾರ ಪ್ರಸ್ತಾಪಿಸಿದ್ದ ಬಂಗಾಳ ರಾಜ್ಯದ ವಿಭಜನೆ. ಇದನ್ನು ಪ್ರತಿಭಟಿಸಿದ ಬಂಗಾಳಿಗಳು 'ವಂಗಭಂಗ' ಎಂದು ದೊಡ್ಡ ಚಳವಳಿಯನ್ನೇ ರೂಪಿಸಿದರು. ಹೋರಾಟ ತೀವ್ರಗೊಂಡಾಗ, ಮಣಿದ ಬ್ರಿಟಿಷ್ ಸರ್ಕಾರ 1912ರಲ್ಲಿ ಬಂಗಾಳವನ್ನು ಪುನಃ ಒಂದು ಮಾಡಿತು. ಕನ್ನಡಿಗರನ್ನು ಒಂದೆಡೆ ಸೇರಿಸುವ ಕನಸು ಹೊತ್ತಿದ್ದವರಿಗೆ ಈ ಘಟನೆ ದೊಡ್ಡ ಪ್ರೇರಣೆಯಾಯಿತು. 

ಕರ್ನಾಟಕ ವಿದ್ಯಾವರ್ಧಕ ಸಂಘ
ಕರ್ನಾಟಕ ರೂಪುಗೊಳ್ಳಲು ಕಾರಣರಾದವರ ಪೈಕಿ ಒಬ್ಬರಾದ ರಾ. ಹ. ದೇಶಪಾಂಡೆ ಹಾಗೂ ಕೆಲವು ಸಮಾನ ಮನಸ್ಕರು ಒಂದೆಡೆ ಸೇರಿದರು. ಕನ್ನಡ ಭಾಷೆಯ ದುಃಸ್ಥಿತಿ ದೂರ ಮಾಡಲೆಂದು 1890ರಲ್ಲೇ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಧಾರವಾಡದಲ್ಲಿ ಸ್ಥಾಪಿಸಿದ್ದರು. ಕನ್ನಡದಲ್ಲಿ ಶಿಕ್ಷಣ ಪ್ರಸಾರಕ್ಕೆ ಪ್ರೋತ್ಸಾಹ, ಪ್ರಾಚೀನ ಕನ್ನಡ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆ, ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ, ಉತ್ತಮ ಮತ್ತು ಉಪಯುಕ್ತ ಕೃತಿಗಳ ಅನುವಾದ ಹಾಗೂ ಪ್ರಕಟಣೆಗೆ ಪ್ರೋತ್ಸಾಹ, ಗ್ರಂಥ ಭಂಡಾರಗಳ ಸ್ಥಾಪನೆ ಮತ್ತು ನಿರ್ವಹಣೆಗೆ ನೆರವು ನೀಡುವುದು ಈ ಸಂಸ್ಥೆಯ ಮೂಲ ಉದ್ದೇಶವಾಗಿತ್ತು. ಲೇಖಕರನ್ನು ಬೆಳೆಸಿದ ಸಂಘ, ಕನ್ನಡ ಗ್ರಂಥಗಳ ಭಾಷೆಯಲ್ಲಿ ಏಕರೂಪತೆ ಇರಬೇಕೆಂಬ ಕಾರಣದಿಂದ 1907ರ ಜೂನ್ ತಿಂಗಳ ಮೊದಲ ವಾರದಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಮೊದಲ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿತು.

ಕನ್ನಡ ಸಾಹಿತ್ಯ ಪರಿಷತ್ತು
ನಂತರದ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸಬೇಕು ಎಂಬ ಪ್ರಯತ್ನದ ಫಲವಾಗಿ 1915ರಲ್ಲಿ ಸ್ಥಾಪನೆಯಾದದ್ದು ಕರ್ನಾಟಕ ಸಾಹಿತ್ಯ ಪರಿಷತ್ತು. ಮುಂದೆ ಇದು ಕನ್ನಡ ಸಾಹಿತ್ಯ ಪರಿಷತ್ತು ಎಂದು ಹೆಸರು ಬದಲಾಯಿಸಿಕೊಂಡಿತು. ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಪರವಾಗಿ ದನಿ ಎತ್ತುವ ಮೂಲಕ ಏಕೀಕರಣದ ಬೇಡಿಕೆಗೆ ಪರಿಷತ್ತು ವೇದಿಕೆ ಕಲ್ಪಿಸಿತು. 

ಕರ್ನಾಟಕ ಕುಲ ಪುರೋಹಿತ
ಎಲ್ಲರಿಗಿಂತ ಪ್ರಮುಖ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿ ಎಂದರೆ 'ಕರ್ನಾಟಕದ ಗತವೈಭವ' ಗ್ರಂಥ ರಚಿಸಿದ ಕರ್ನಾಟಕ 'ಕುಲ ಪುರೋಹಿತ' ಆಲೂರು ವೆಂಕಟರಾಯರು. ಕರ್ನಾಟಕ ಏಕೀಕರಣದ ಬಗ್ಗೆ ಕನಸು ಕಂಡಿದ್ದಲ್ಲದೇ ಅದರ ಸಾಕಾರಕ್ಕೆ ದುಡಿದ ಹಿರಿಯ ಜೀವ ಇದು. ಆಲೂರು ವೆಂಕಟರಾಯರು, ಗದಿಗೆಯ್ಯ ಹೊನ್ನಾಪುರಮಠ ಮತ್ತು ಕಡಪಾ ರಾಘವೇಂದ್ರರಾಯರು ಸೇರಿ 1916ರಲ್ಲಿ ಸ್ಥಾಪಿಸಿದ 'ಕರ್ನಾಟಕ ಸಭೆ' ಕರ್ನಾಟಕ ಏಕೀಕರಣದ ಬೇಡಿಕೆಗೆ ಇಂಬು ಕೊಟ್ಟಿತು. ರಾಜಕೀಯ ಬೆಂಬಲವನ್ನೂ ಪಡೆದಿದ್ದ ಕರ್ನಾಟಕ ಸಭೆಯು ಏಕೀಕರಣದ ವಿಷಯದಲ್ಲಿ ಹಲವಾರು ಹೋರಾಟಗಳನ್ನು ನಡೆಸಿತು. ಇದರ ಪ್ರೇರಣೆಯಿಂದ ನಾಡಹಬ್ಬಗಳು ನಡೆದವು. ಸಕ್ಕರಿ ಬಾಳಾಚಾರ್ಯ, ಡಾ. ಯು. ರಾಮರಾವ್, ಮುದವೀಡು ಕೃಷ್ಣರಾವ್, ಕಡಪಾ ರಾಘವೇಂದ್ರ ರಾವ್, ಮಂಗಳವೇಡೆ ಶ್ರೀನಿವಾಸರಾವ್ ಮುಂತಾದ ಹಿರಿಯರು ಸಭೆಯ ಜೊತೆ ಗುರುತಿಸಿಕೊಂಡಿದ್ದರು.

ಬ್ರಿಟಿಷರೂ ಬಯಸಿದ್ದರು
1918ರಲ್ಲೇ ಭಾರತದಲ್ಲಿ ಭಾಷಾವಾರು ಪ್ರಾಂತ ರಚನೆಯ ಸಂಬಂಧ ಮಾಂಟೆಗ್ಯೂ-ಚೆಲ್ಮ್ಸ್‌ಫರ್ಡ್ ಸಮಿತಿ ನೇಮಕಗೊಂಡಿತ್ತು. ಆ ಸಮಿತಿಯು ದೇಶವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸುವುದು ಅಗತ್ಯ ಎಂದು ಶಿಫಾರಸು ಮಾಡಿತು. ಇದನ್ನು ಆಗಿನ ಬ್ರಿಟಿಷ್ ಸರ್ಕಾರ ಕೂಡ ಒಪ್ಪಿಕೊಂಡಿತ್ತು. 1920ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನ ಏಕೀಕರಣದ ನಿಟ್ಟಿನಲ್ಲಿ ಒಂದು ಮಹತ್ವದ ವೇದಿಕೆ. ಕರ್ನಾಟಕ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು, ಬ್ರಿಟಿಷ್ ಆಳ್ವಿಕೆಗೆ ಸೇರಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಕರ್ನಾಟಕ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿಸಲಾಯಿತು. 

ಏಕೀಕರಣಕ್ಕೆ ವೇದಿಕೆಯಾದ ಬೆಳಗಾವಿ ಅಧಿವೇಶನ
ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆಯಿತು. ಕರ್ನಾಟಕ ಸಭೆಯ ಮೊದಲ ಪರಿಷತ್ತು ಬೆಳಗಾವಿಯಲ್ಲಿ 25-12-1924ರಂದು, ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು.

ಮದ್ರಾಸ್ ಮತ್ತು ಮುಂಬಯಿ ಆಧಿಪತ್ಯದ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯ ಪ್ರಸ್ತಾಪಿತಗೊಂಡಿತು. ಮದ್ರಾಸ್ ವಿಧಾನ ಸಭೆಯಲ್ಲಿ ಎ. ರಂಗನಾಥ ಮೊದಲಿಯಾರ್, ಜೆ. ಎ. ಸಲ್ಡಾನ, ಎ. ಬಿ. ಶೆಟ್ಟಿ, ಡಾ. ನಾಗನಗೌಡ ಮುಂತಾದ ಸದಸ್ಯರು ಕರ್ನಾಟಕ ಏಕೀಕರಣವನ್ನು ಬೆಂಬಲಿಸಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಮುಂಬಯಿ ವಿಧಾನ ಸಭೆಯಲ್ಲಿ 1919ರಲ್ಲಿ ವಿ. ಎನ್. ಜೋಗ್ ಕರ್ನಾಟಕ ಪ್ರಾಂತ ರಚನೆಗೆ ಕೋರಿ ಠರಾವು ಮಂಡಿಸಿದ್ದರು. ಆದರೆ, ಅದೂ ತಿರಸ್ಕೃತವಾಯಿತು. 1926ರಲ್ಲಿ ಸರ್ ಸಿದ್ದಪ್ಪ ಕಂಬಳಿ ಪುನಃ ಕರ್ನಾಟಕ ಪ್ರಾಂತ ರಚನೆಗೆ ಠರಾವು ಮಂಡಿಸಿದರಾದರೂ, ಏಕೀಕರಣಕ್ಕೆ ಕನ್ನಡಿಗರ ಬೆಂಬಲವಿಲ್ಲ ಎಂಬ ಕಾರಣ ನೀಡಿ ಸರ್ಕಾರ ಠರಾವನ್ನು ತಿರಸ್ಕರಿಸಿತು.

ಕೊನೆಗೆ ಮುಹೂರ್ತ ಕೂಡಿ ಬಂದಿದ್ದು 1938ರ ಮೇ ತಿಂಗಳ ಮೊದಲ ವಾರ. ಆಗ ನಡೆದ ಮುಂಬಯಿ ಶಾಸನ ಸಭೆ ಕರ್ನಾಟಕ ಏಕೀಕರಣ ಗೊತ್ತುವಳಿಯನ್ನು ಸ್ವೀಕರಿಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿ. ಜಿ. ಖೇರ್, ಸರ್ ಸಿದ್ದಪ್ಪ ಕಂಬಳಿ, ವಿ. ಎನ್. ಜೋಗ್ ಗೊತ್ತುವಳಿಯನ್ನು ಅನುಮೋದಿಸಿದರು. ಆದರೆ, ಎರಡನೇ ಜಾಗತಿಕ ಯುದ್ಧ ಪ್ರಾರಂಭವಾಗಿದ್ದರಿಂದ ಭಾಷಾವಾರು ಪ್ರಾಂತ ರಚನೆ ಆಗಲಿಲ್ಲ.

ಸಮಗ್ರ ಕರ್ನಾಟಕದ ಕನಸು
1944ರಲ್ಲಿ ಧಾರವಾಡದಲ್ಲಿ ನಡೆದ 9ನೆಯ ಕರ್ನಾಟಕ ಏಕೀಕರಣ ಪರಿಷತ್ತು ಸಮಾವೇಶದಲ್ಲಿ ಸ್ವಾಗತಾಧ್ಯಕ್ಷರಾಗಿದ್ದ ಎಸ್. ಎಸ್. ಮಳೀಮಠ್, ಕರ್ನಾಟಕ ಏಕೀಕರಣವೆಂದರೆ, ಬ್ರಿಟಿಷ್ ಕರ್ನಾಟಕ ಪ್ರಾಂತಗಳಷ್ಟೇ ಅಲ್ಲ, ಸಂಸ್ಥಾನಗಳೂ ಸೇರಿದಂತೆ ಸಮಗ್ರ ಕರ್ನಾಟಕದ ಏಕೀಕರಣ ಎಂದು ಸಾರಿದರು.

1946ರಲ್ಲಿ ದಾವಣಗೆರೆಯಲ್ಲಿ ನಡೆದ ಕರ್ನಾಟಕಸ್ಥರ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮುಂಬಯಿ ಆಧಿಪತ್ಯದ ಕೃಷಿ ಮಂತ್ರಿ ಎಂ. ಪಿ. ಪಾಟೀಲರು 'ಭಾರತಕ್ಕೆ ಸ್ವಾತಂತ್ರ್ಯವು ಹೇಗೋ ಹಾಗೆ ಕರ್ನಾಟಕಕ್ಕೆ ಸ್ವಾಯತ್ತತೆ' ಎಂದು ಘೋಷಿಸಿದರು. ಕರ್ನಾಟಕ ಏಕೀಕರಣಕ್ಕೆ ಕೆಲವು ಸಂಸ್ಥಾನಿಕರು ಅಡ್ಡಿಯಾಗಿದ್ದಾರೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೋ. ಚೆನ್ನಬಸಪ್ಪ 'ಸಾಧ್ಯವಾದರೆ ಮೈಸೂರನ್ನು ಒಳಗೊಂಡು, ಅಗತ್ಯವಾದರೆ ಅದನ್ನು ಬಿಟ್ಟು ಕರ್ನಾಟಕ ಏಕೀಕರಣವಾಗಬೇಕು' ಎಂಬ ಗೊತ್ತುವಳಿ ಮಂಡಿಸಿದರು. 

ಆದರೆ, ಕೆಂಗಲ್ ಹನುಮಂತಯ್ಯನವರು 'ಮೈಸೂರನ್ನು ಒಳಗೊಂಡು ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು' ಎಂದು ಗೊತ್ತುವಳಿಗೆ ತಿದ್ದುಪಡಿ ತಂದರು. ಗೊತ್ತುವಳಿಯನ್ನು ಜಾರಿಗೆ ತರಲು ಎಂ. ಪಿ. ಪಾಟೀಲ, ಎಸ್. ನಿಜಲಿಂಗಪ್ಪ ಮತ್ತು ಕೆ. ಬಿ. ಜಿನರಾಜ ಹೆಗ್ಗಡೆ ಅವರಿದ್ದ ಸಮಿತಿ ರಚನೆಯಾಯಿತು.

ಸ್ವತಂತ್ರ ರಾಜ್ಯದತ್ತ...
1947ರ ಮುಂಬಯಿ ಶಾಸನ ಸಭೆಯಲ್ಲಿ ರೋಣದ ಅಂದಾನಪ್ಪ ದೊಡ್ಡಮೇಟಿ ಅವರು ಪ್ರತ್ಯೇಕ ಕರ್ನಾಟಕ ಪ್ರಾಂತ್ಯ ರಚನೆಗೆ ಒತ್ತಾಯಿಸಿ ಖಾಸಗಿ ಗೊತ್ತುವಳಿ ಮಂಡಿಸಿದರು. ಕೆಲವು ತಿದ್ದುಪಡಿಗಳೊಂದಿಗೆ ಗೊತ್ತುವಳಿಯು 60 ಮತಗಳನ್ನು ಪಡೆದು ಸ್ವೀಕೃತವಾಯಿತು. ವಿರುದ್ಧ ಬಂದದ್ದು ಕೇವಲ ಆರು ಮತಗಳು. ಮದ್ರಾಸ್ ಶಾಸನ ಸಭೆಯಲ್ಲಿಯೂ ಡಾ. ಪಿ. ಸುಬ್ಬರಾಯನ್ ಭಾಷಾವಾರು ಪ್ರಾಂತ್ಯ ರಚನೆಯ ಸಂಬಂಧ ಮಂಡಿಸಿದ ಗೊತ್ತುವಳಿ ಸ್ವೀಕೃತವಾಯಿತು.

ಸ್ವತಂತ್ರ ಭಾರತದ ಸಂವಿಧಾನದ ರಚನೆಗೆ ಸೇರಿದ್ದ ಘಟನಾ ಸಮಿತಿಯ ಮೇಲೂ ಭಾಷಾವಾರು ಪ್ರಾಂತ್ಯ ರಚನೆಗೆ ಒತ್ತಡ ಹೆಚ್ಚಿತು. ಅಂದಿನ ಘಟನಾ ಸಮಿತಿಯ ಸಭೆಯಲ್ಲೇ ಭಾಷಾವಾರು ಪ್ರಾಂತ್ಯ ರಚನೆ ಕುರಿತು ವರದಿ ಸಿದ್ಧಪಡಿಸಲು ಉಪ ಸಮಿತಿಯೊಂದರ ರಚನೆಯಾಯಿತು.

1947ರ ಆಗಸ್ಟ್ 15ರಂದು ಭಾರತ ಸ್ವತಂತ್ರವಾಯಿತು. ಆದರೆ, ಭಾರತ ಒಕ್ಕೂಟದ ಜೊತೆ ಮೈಸೂರು ಸಂಸ್ಥಾನ ಸೇರ್ಪಡೆಯಾಗಿದ್ದು 1947ರ ಅಕ್ಟೋಬರ್ 24ರಂದು. ಹೈದರಾಬಾದ್ ಕರ್ನಾಟಕದ ಸೇರ್ಪಡೆ 1948ರ ಸೆಪ್ಟೆಂಬರ್ 17ರಂದು. 

1948ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ವರದಿ ನೀಡಲು, ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್. ಕೆ. ಧರ್ ಅಧ್ಯಕ್ಷತೆಯಲ್ಲಿ ಆಯೋಗ ನೇಮಿಸಿತ್ತು. ಆದರೆ, ವರದಿ ಭಾಷಾವಾರು ಪ್ರಾಂತ್ಯ ರಚನೆ ವಿರುದ್ಧವಾಗಿ ಬಂತು. 

ಕರ್ನಾಟಕ ಏಕೀಕರಣ ಪರಿಷತ್ತು
ನ್ಯಾಯಮೂರ್ತಿ ಧರ್ ಆಯೋಗದ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಸಮಿತಿಯಲ್ಲಿದ್ದ ಜವಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಪಟ್ಟಾಭಿರಾಮಯ್ಯ ಕೂಡಾ ಆಯೋಗದ ಶಿಫಾರಸುಗಳನ್ನೇ ಎತ್ತಿ ಹಿಡಿದರು. ಇದನ್ನು ಖಂಡಿಸಿ ರಾಜ್ಯದ ಎಲ್ಲೆಡೆ ಸಭೆ, ಸಮಾರಂಭ ಮತ್ತು ಸಮ್ಮೇಳನಗಳು ನಡೆದವು. ಕಾಂಗ್ರೆಸ್ ನಾಯಕರಿಂದ ಕರ್ನಾಟಕ ಏಕೀಕರಣ ಸಾಧ್ಯವಾಗದು ಎಂಬ ಅಭಿಪ್ರಾಯದಿಂದ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ಸ್ಥಾಪಿತವಾಗಿ, ಏಕೀಕರಣಕ್ಕೆ ಹೊಸ ತಿರುವು ಬಂದಿತು.

ಈ ಮಧ್ಯೆ ಆಂಧ್ರ ಪ್ರಾಂತ ರಚನೆಗೆ ಒತ್ತಾಯಿಸಿ, 1951ರ ಆಗಸ್ಟ್‌ನಲ್ಲಿ ಪೊಟ್ಟಿ ಶ್ರೀರಾಮುಲು ತಿರುಪತಿಯಲ್ಲಿ 37 ದಿನಗಳ ಉಪವಾಸ ಮಾಡಿದರು. ನಂತರ ಎರಡನೆಯ ಬಾರಿಗೆ ಆಮರಣಾಂತ ಉಪವಾಸಕ್ಕೆ ಕೈಹಾಕಿದ ಪೊಟ್ಟಿ ಶ್ರೀರಾಮುಲು, 58 ದಿನಗಳ ಉಪವಾಸ ಮಾಡಿ ನಿಧನರಾದರು. ಇದರಿಂದ ಎಚ್ಚೆತ್ತ ಲೋಕಸಭೆ, ಮದರಾಸ್ ನಗರವನ್ನು ಬಿಟ್ಟು ಆಂಧ್ರ ಪ್ರಾಂತ ರಚನೆಗೆ ನಿರ್ಧರಿಸಿತು. ಆಂಧ್ರ ಪ್ರಾಂತಕ್ಕೆ ಸೇರಿಸಬೇಕೆಂಬ ವಾದ ಇದ್ದ ಬಳ್ಳಾರಿ ತಾಲ್ಲೂಕಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ಸಲ್ಲಿಸುವಂತೆ ರಾಷ್ಟ್ರಪತಿಗಳು ಹೈದರಾಬಾದ್‌ನ ಮುಖ್ಯ ನ್ಯಾಯಾಧೀಶ ಎಲ್. ಎಸ್. ಮಿಶ್ರಾ ಅವರಿಗೆ ಜವಾಬ್ದಾರಿ ಕೊಟ್ಟಿತು. 

ಆಂಧ್ರಕ್ಕಿಂತ ಕರ್ನಾಟಕದ ಪರ 90 ಮನವಿಗಳು ಹೆಚ್ಚಾಗಿ ಬಂದವು. ಜೊತೆಗೆ, ಕೊನೆಯ ಘಳಿಗೆಯಲ್ಲಿ ಕರ್ನಾಟಕದ ಖ್ಯಾತ ಇತಿಹಾಸ ತಜ್ಞ ಆರ್. ಎಸ್. ಪಂಚಮುಖಿ ಅವರ ಅಭಿಪ್ರಾಯವೂ ರಾಜ್ಯದ ಪರವಾಗಿಯೇ ಬಂದಿದ್ದರಿಂದ, ಬಳ್ಳಾರಿ ತಾಲ್ಲೂಕನ್ನು ಕರ್ನಾಟಕಕ್ಕೇ ಸೇರಿಸಲು ಮಿಶ್ರಾ ಶಿಫಾರಸು ಮಾಡಿದರು.

ಹುಬ್ಬಳ್ಳಿ ಗೋಲಿಬಾರ್
ಈ ಸಂದರ್ಭದಲ್ಲೇ, ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ, ಶಂಕರಗೌಡ ಪಾಟೀಲರು 28-03-1953ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. 19-04-1953ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದ ವಿಷಯ ತಿಳಿದ ಕರ್ನಾಟಕ ಏಕೀಕರಣ ಕಾರ್ಯಕರ್ತರು ಬೆಳಗಿನಿಂದಲೇ ಗುಳಕವ್ವನ ಕಟ್ಟೆ ಮೈದಾನದಲ್ಲಿ ಗುಂಪುಗೂಡಿದರು. ಮೊದಮೊದಲು ಶಾಂತಿಯುತವಾಗಿದ್ದ ಪ್ರತಿಭಟನೆ ಕ್ರಮೇಣ ಉಗ್ರವಾಯಿತು. ಗುದ್ಲೆಪ್ಪ ಹಳ್ಳಿಕೇರಿ ಅವರ ಜೀಪಿಗೆ ಬೆಂಕಿ ಹಚ್ಚಿದರು. ಪೊಲೀಸರ ನಿಯಂತ್ರಣ ತಪ್ಪಿದಾಗ ಲಾಠೀ ಚಾರ್ಜ್ ಅಲ್ಲದೆ, ಗೋಲೀಬಾರ್ ಕೂಡಾ ಮಾಡಲಾಯಿತು. ಗಲಭೆಗೆ ಕಾರಣಕರ್ತರೆಂದು ಬಂಧಿತರಾದವರ ವಿಚಾರಣೆ ನಡೆಯಿತು. ಆಗ ಸ್ಥಾನಬದ್ಧತಾ ಕಾನೂನಿನ ಅಡಿಯಲ್ಲಿ ಬಂಧಿತರಾಗಿದ್ದವರ ಪರ ವಾದಿಸಿದವರು ಮಾಜಿ ಮುಖ್ಯಮಂತ್ರಿ ದಿ. ಎಸ್. ಆರ್. ಬೊಮ್ಮಾಯಿ. 

ಏಕೀಕರಣಕ್ಕೆ ಹೆಚ್ಚಿದ ಒತ್ತಡ
ಹುಬ್ಬಳ್ಳಿ ಗಲಭೆಯ ನಂತರ, ಮಿಶ್ರಾ ವರದಿ ಸ್ವೀಕೃತವಾಗಿ ಆಂಧ್ರ ಪ್ರದೇಶದ ರಚನೆ ಖಚಿತವಾಯಿತು. ಕಾಂಗ್ರೆಸ್ ನಾಯಕರನ್ನೇ ನಂಬಿ ಕೂತರೆ ಕರ್ನಾಟಕ ಏಕೀಕರಣ ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದ್ದ ಕಾಂಗ್ರೆಸ್ಸೇತರ ಪಕ್ಷದ ಕೆಲವು ಮುಖಂಡರು 28-05-1953ರಂದು ದಾವಣಗೆರೆಯಲ್ಲಿ ಸಭೆ ಸೇರಿ, 'ಕರ್ನಾಟಕ ರಾಜ್ಯ ನಿರ್ಮಾಣ ಮಾಡುವುದು ಕನ್ನಡಿಗರ ಜನ್ಮಸಿದ್ಧ ಹಕ್ಕು' ಎಂಬ ಘೋಷಣೆಯೊಂದಿಗೆ, ಮಾಜಿ ಸಂಸದ ದಿ. ಅಳವಂಡಿ ಶಿವಮೂರ್ತಿ ಸ್ವಾಮಿ ಮತ್ತು ಕೆ. ಆರ್. ಕಾರಂತರ ನೇತೃತ್ವದಲ್ಲಿ 'ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಏಕೀಕರಣ ಹೋರಾಟಕ್ಕೆ ಜನಾಂದೋಲನದ ಸ್ವರೂಪ ನೀಡುವಲ್ಲಿ ಪರಿಷತ್ತು ಯಶ್ವಸಿಯಾಯಿತು. 1953ರ ಅಕ್ಟೋಬರ್ ಒಂದರಂದು ಆಂಧ್ರಪ್ರದೇಶ ರಚನೆಯಾದ ಸಂದರ್ಭದಲ್ಲೇ ಬಳ್ಳಾರಿ ಜಿಲ್ಲೆ ಮೈಸೂರು ಸಂಸ್ಥಾನದಲ್ಲಿ ವಿಲೀನಗೊಂಡಿತು.

ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನ ಹೆಚ್ಚಿದಾಗ, ಕೇಂದ್ರ ಸರ್ಕಾರ 29-12-1953ರಂದು ರಚಿಸಿದ್ದ ಫಜಲ್ ಆಲಿ ನೇತೃತ್ವದ ರಾಜ್ಯ ಪುನರ್ವಿಂಗಡಣಾ ಆಯೋಗ ಕರ್ನಾಟಕ ರಾಜ್ಯ ರಚನೆಯ ಅಗತ್ಯತೆಯನ್ನು ಎತ್ತಿ ಹಿಡಿಯಿತು. ಅದರ ಕರಡು ವರದಿಯಲ್ಲಿ ಇಡಿಯಾಗಿ ಬಳ್ಳಾರಿ ಜಿಲ್ಲೆಯನ್ನು ಆಂಧ್ರಕ್ಕೆ ಸೇರಿಸಲು ಶಿಫಾರಸು ಮಾಡಿತ್ತು. ಅದನ್ನು ವಿರೋಧಿಸಿ, ಬಳ್ಳಾರಿ ಜಿಲ್ಲೆಯಾದ್ಯಂತ ತುಂಗಭದ್ರಾ ನದಿ ನೀರು ಹೋರಾಟ ನಡೆಯಿತು. ರಾಜ್ಯ ಪುನರ್ವಿಂಗಡಣಾ ಆಯೋಗವು ಹಿಂದಿನ ವರದಿಗಳನ್ನು ಪರಿಶೀಲಿಸಿ, ಬಂದ ಸಾವಿರಗಟ್ಟಲೆ ಮನವಿಗಳ ಅಧ್ಯಯನ ಮಾಡಿ, ಕೇಂದ್ರ ಸರ್ಕಾರಕ್ಕೆ 1955ರ ಅಕ್ಟೋಬರ್ 10ರಂದು ತನ್ನ ವರದಿಯನ್ನು ಸಲ್ಲಿಸಿತು.

ರಾಜ್ಯ ಪುನರ್ವಿಂಗಡಣಾ ಆಯೋಗದ ವರದಿಯ ಬಗ್ಗೆ ಸಂಸತ್ತು 1956ರ ಜನವರಿ 19ರಂದು ಚರ್ಚಿಸಿ, 1956ರ ಮಾರ್ಚ್ 19ರಂದು ವಿಧೇಯಕ ಪ್ರಕಟಿಸಿತು. ಅದರ ಪ್ರಕಾರ 1956ರ ನವೆಂಬರ್ 1ರಂದು ಕರ್ನಾಟಕ (ಆಗ ಮೈಸೂರು) ರಾಜ್ಯ ಅಸ್ತಿತ್ವಕ್ಕೆ ಬರಲಿತ್ತು. ಆಗ ಈ ಪ್ರದೇಶಗಳು ಹೊಸ ರಾಜ್ಯದಲ್ಲಿ ಸೇರ್ಪಡೆಯಾಗಬೇಕಿತ್ತು: 

1. ಇಡಿಯಾಗಿ ಮೈಸೂರು ರಾಜ್ಯ.
2. ಮುಂಬಯಿ ರಾಜ್ಯದ ಬಿಜಾಪುರ, ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿ (ಚಾಂದಘಡ ತಾಲ್ಲೂಕನ್ನು ಬಿಟ್ಟು) ಜಿಲ್ಲೆಗಳು.
3. ಹೈದರಾಬಾದ್ ರಾಜ್ಯದ ಗುಲಬರ್ಗಾ ಜಿಲ್ಲೆ (ಕೊಡಂಗಲ್ ಮತ್ತು ತಾಂಡೂರು ತಾಲ್ಲೂಕುಗಳನ್ನು ಬಿಟ್ಟು), ರಾಯಚೂರು ಜಿಲ್ಲೆ (ಆಲಂಪುರ ಮತ್ತು ಗದ್ವಾಲ್ ತಾಲ್ಲೂಕುಗಳನ್ನು ಬಿಟ್ಟು) ಮತ್ತು ಬೀದರ್ ಜಿಲ್ಲೆಯ ಬೀದರ್, ಭಾಲ್ಕಿ, ಔರಾದ್ (ಸಂತಪುರ) ಮತ್ತು ಹುಮನಾಬಾದ್ ತಾಲ್ಲೂಕುಗಳು.
4. ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ತಾಲ್ಲೂಕು ಮತ್ತು ಅಮೀನ್ ದ್ವೀಪಗಳನ್ನು ಬಿಟ್ಟು) ಮತ್ತು ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು.
5. ಕೊಡಗು ರಾಜ್ಯ.

ಈಡೇರಿದ ಕನಸು
ವಿಜಯನಗರ ಕಾಲದವರೆಗೂ ದೊಡ್ಡ ಸಾಮ್ರಾಜ್ಯವಾಗಿದ್ದ ಕರುನಾಡು ಟಿಪ್ಪು ಸುಲ್ತಾನ್‌ನ ಮರಣದ ನಂತರ ಬ್ರಿಟಿಷರ ಒಡೆದು ಆಳುವ ನೀತಿಯಿಂದ ಹಲವಾರು ಪ್ರಾಂತ್ಯಗಳಾಗಿ ವಿಭಜನೆಯಾಗಿ ವಿವಿಧ ಭಾಷೆಗಳ ಪ್ರಾಂತ್ಯಗಳಲ್ಲಿ ಇಲ್ಲವಾಗಿತ್ತು. ಈಗ ಕನ್ನಡಿಗರನ್ನೊಳಗೊಂಡ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬರುತ್ತದೆಂಬ ಸಂತಸದ ಜೊತೆಗೆ, ಇದಕ್ಕಾಗಿ ಹೋರಾಡಿದ ಹಿರಿಯ ಜೀವಗಳು ಹಂಬಲಿಸಿದಂತೆ, ಪೂರ್ತಿ ಏಕೀಕರಣ ಸಾಧ್ಯವಾಗಲಿಲ್ಲ. 

ಏಕೆಂದರೆ, ಕಾಸರಗೋಡು ಕೈಬಿಟ್ಟಿತ್ತು. ಅಕ್ಕಲಕೋಟೆ, ಸೊಲ್ಲಾಪುರಗಳು ಹೊರಗೇ ಉಳಿದಿದ್ದವು. ನೀಲಗಿರಿ ಕೂಡಾ ದಕ್ಕಲಿಲ್ಲ. ಏಕೀಕರಣದ ನಂತರವೂ ಪ್ರಾಚೀನ ಕಾಲದಿಂದ ಇದ್ದ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿತು. ಕೊನೆಗೂ, ಸಾಕಷ್ಟು ಒತ್ತಡದ ನಂತರ, 1973 ನವೆಂಬರ್ 1ರಂದು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.

ಏನೇ ಆದರೂ, ಬೇರೆ ಬೇರೆ ಪ್ರಾಂತಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು 1956ರ ನವೆಂಬರ್ 1ರಂದು ಒಂದೇ ರಾಜ್ಯದ ಆಡಳಿತ ವ್ಯಾಪ್ತಿಗೆ ಬಂದಿದ್ದು ಒಂದು ಐತಿಹಾಸಿಕ ಹೋರಾಟದ ಫಲ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಶತಮಾನಗಳ ಸಂಕೋಲೆ ಕಳೆದುಕೊಂಡು ಎಲ್ಲ ರೀತಿಯಿಂದ ಒಂದಾಯಿತು. ಏಕೀಕರಣದ ಕನಸು ಈಡೇರುವ ಮೂಲಕ, ಕನ್ನಡಿಗರ ಭಾವನಾತ್ಮಕವಾಗಿಯೂ ಒಂದಾದರು. ಸಾಂಸ್ಕೃತಿಕ ಐಕ್ಯತೆಗೂ ಇಂಬು ದೊರೆಯಿತು. 

ಇಂಥದೊಂದು ಕನಸನ್ನು ನನಸು ಮಾಡಲು ಹೋರಾಡಿದ ಎಲ್ಲರ ತ್ಯಾಗ ಮತ್ತು ಬಲಿದಾನದ ಫಲ ಈ ನಮ್ಮ ಹೆಮ್ಮೆಯ ಕರ್ನಾಟಕ. ಆ ಸ್ಫೂರ್ತಿ ಅಳಿಯದಿರಲಿ. ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ಬೇಗ ಮೈದಾಳಲಿ. 

ಸಿರಿಗನ್ನಡಂಗೆಲ್ಗೆ!

ಕೃಪೆ: ಶ್ರೀ ಚಾಮರಾಜ ಸವಡಿ 

ಕರ್ನಾಟದ ಏಕೀಕರಣ :
ಬಹಳಷ್ಟೂ ನಮ್ಮ ಕನ್ನಡಿಗರಿಗೆ ಗೊತ್ತಿಲ್ಲ ಕರ್ನಾಟದ ಏಕೀಕರಣ ಅಂದರೆ ಏನು, ಅನೇಕ ಕಡೆ ಸುವರ್ಣ ಸಂಭ್ರಮ ಆಗುತ್ತಿದೆ, ಗಲ್ಲಿ ಗಲ್ಲಿಗಳಲ್ಲಿ ಸಮಾರಂಭ ನಡೆಯುತ್ತಿದೆ. ಅದೇ ಹಾಡು-ಕುಣಿತ ಮತ್ತು ಕೆಲವು ರಾಜಕೀಯ ನಾಯಕರ ಮತ್ತು ಉಟ್ಟು ಹೋರಾಟಗಾರಾರ ಕಿವಿಗೆ ಅಪ್ ಪಳಿಸುವ ಭಾಷಣಗಳು. ಆದರೆ ಇದಕ್ಕೆ ನಿಜಕ್ಕೂ ಹೋರಾಡಿದ, ಭಗೀರಥ ಪ್ರಯತ್ನವನ್ನು ಮಾಡಿದ ಶ್ರೀ ಆಲೂರರ ಸಾಧನೆ ನಮ್ಮ ಇಂದಿನ ಜನಾಂಗಕ್ಕೆ ತಿಳಿಯದಿರುವುದು ದುಃಖದ ಸಂಗತಿ. ಉದ್ದಗಲಕ್ಕೂ ಹಂಚಿಹೋಗಿದ್ದ ನಮ್ಮ ರಾಜ್ಯವನ್ನು ಒಂದು ಮಾಡಿದ ಸಾಧನೆ ಕಡಿಮೆಯೇ, ಯಾಕೆ ನಾವು ಇವರನ್ನು ಸ್ಮರಿಸುತ್ತಿಲ್ಲ, ಯಾಕೆ ನಮ್ಮ ಶಿಕ್ಷಣದಲ್ಲಿ ಇವರ ಪಾಠವಿಲ್ಲ ?? ಎಲ್ಲೆಲ್ಲಿ ತೇಪೆಗಳಾಗಿದ್ದವು ಅಂತ ನಮ್ಮ ಜನಕ್ಕೆ ಗೊತ್ತೆ ??

ಬೆಂಗಳೂರು ಗ್ರಾಮಂತರ, ಮಂಡ್ಯ, ಕೋಲಾರ, ತುಮಕೂರು. ಮೈಸೂರುಗಳನ್ನು ಒಳಗೊಂಡ ಮೈಸೂರು ಅರಸರ ಪ್ರಾಂತ್ಯ.
ಬ್ರಿಟಿಷ್ ಆಡಳಿತದಲ್ಲಿ ಇದ್ದ ಬೆಂಗಳೂರು(ಕಂಟೋನ್ಮೆಂಟ್)
ಬ್ರಿಟಿಷ್ ಆಡಳಿತ ಆದರೆ ಮುಂಬೈ ಪ್ರೆಸಿಡೆನ್ಸಿದಲ್ಲಿ ಇದ್ದ ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಮತ್ತು ವಿಜಾಪುರ. ಉತ್ತರ ಮತ್ತು ದಕ್ಶಿಣ ಸೊಲ್ಲಾಪುರ ಮತ್ತು ಮಂಗಳವಾಡೆ.
ಬ್ರಿಟಿಷ್ ಮದ್ರಾಸ್ ಪ್ರಾಂತ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು, ಬಳ್ಳಾರಿ, ಪೆನೆಗೊಂಡ, ನೀಲಗಿರಿ, ಕೊಳ್ಳೆಗಾಲ, ಹಿಂದೂಪುರ, ಕಲ್ಯಾಣದುರ್ಗ, ಪೆನಗೋಂಡ, ಹೊಸೂರು, ಮಡಕಶಿರಾ ಮತ್ತು ತಾಳವಾಡಿ.
ಕೊಡಗು
ಹೈದಾರಬಾದ್ ಸಂಸ್ಥಾನಕ್ಕೆ ಸೇರಿದ ಬೀದರ್, ರಾಯಚೂರು ಮತ್ತು ಗುಲ್ಬರ್ಗ
ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ ಷಾಪುರ, ಶಿರಹಟ್ಟಿ, ದೊಡ್ದವಾಡ.
ಮೀರಜ್ ಸಂಸ್ಥಾನಕ್ಕೆ ಸೇರಿದ ಲಕ್ಶ್ಮೇಶ್ವರ
ಕಿರಿಯ ಮೀರಜ್ ಸಂಸ್ಥಾನಕ್ಕೆ ಸೇರಿದ ಗುಡಗೇರಿ
ಹಿರಿಯ ಕುರುಂದ್ ನಾಡ್
ವಡಗಾಂವ್
ಔಂದ್ ಸಂಸ್ಥಾನಕ್ಕೆ ಸೇರಿದ ವಿಜಾಪುರದ ಗುಣದಾಳು
ರಾಮದುರ್ಗ ಸಂಸ್ಥಾನ
ಜಮಖಂಡಿ ಸಂಸ್ಥಾನಕ್ಕೆ ಸೇರಿದ ಕುಂದಗೋಳ, ಚಿಪ್ಪಲಕಟ್ಟಿ ೧೫) ಮುಧೋಳ ಸಂಸ್ಥಾನಕ್ಕೆ ಸೇರಿದ ಮುಧೊಳ್
ಸೊಂಡುರು ಸಂಸ್ಥಾನಕ್ಕೆ ಸೇರಿದ ಸೊಂಡುರು
ಜತ್ ಸಂಸ್ಥಾನಕ್ಕೆ ಸೇರಿದ ಜತ್ ಜಿಲ್ಲೆ
ಸವಣೂರು ಸಂಸ್ಥಾನಕ್ಕೆ ಸೇರಿದ ಸವಣೂರು ಜಿಲ್ಲೆ
ಅಕ್ಕಲಕೋಟೆಯ ಸಂಸ್ಥಾನಕ್ಕೆ ಸೇರಿದ ಅಕ್ಕಲಕೋಟೆ ಜಿಲ್ಲೆ ಹೀಗೆ ಅನೇಕರ ಕೈಗಳಲ್ಲಿ ಹಂಚಿಹೊಗಿದ್ದ ಕರುನಾಡನ್ನು ಒಂದು ಮಾಡಿದ್ದು ನಿಜಕ್ಕೂ ಮಾಯೆಯೆ ಸರಿ, ಕನ್ನಡಿಗರ ಹಿತ ರಕ್ಸಿಸುವ ಒಂದು ರಾಜ್ಯವಿರಲಿಲ್ಲ, ನಮ್ಮ ಜನರನ್ನು ಆಳುವ ಪ್ರಭುಗಳು ಇತರ ಭಾಷಿಕರಾಗಿದ್ದು, ನಾವು ಅನಾಥಪ್ರಜ್ನೆ ಅನುಭವಿಸುತ್ತ ಇದ್ದೆವೂ. ಏಕೀಕರಣಕ್ಕೆ ಅಡ್ದಿ ಆತಂಕಗಳು ಬರಲಿಲ್ಲ್ವವೇ ?? ಬಂಡಾಯದ ಧ್ವನಿ ಕೇಳಿಬಂದವೂ, ಆದರೂ ದೃತಿಗೆಡದೆ ಕನ್ನಡದ ಹಿತಕ್ಕೆ ಇಟ್ಟ ಹೆಜ್ಜೆಯನ್ನು ಹಿಂದೆ ತೆಗೆಯದ ಆ ಚೇತನ ನಮ್ಮ ಇಂದಿನ ಪೀಳಿಗೆಗೆ ಮಾದರಿ.

ವಿಶ್ವ ಅಂಚೆ ದಿನ

 


ಪ್ರತಿ ವರ್ಷ ಅಕ್ಟೋಬರ್ ೯ನೇ ತಾರೀಕಿನಂದು ವಿಶ್ವ ಅಂಚೆ ದಿನವೆಂದು ಆಚರಿಸಲಾಗುತ್ತದೆ. ೧೮೭೪ರ ಇದೇ ದಿನಾಂಕದಂದು ಸ್ವಿಟ್ಜರ್‌ಲೆಂಡಿನ ಬ್ರೆನ್ ನಗರದಲ್ಲಿ ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯು. ಪಿ. ಯು.) ಸ್ಥಾಪನೆಯಾಗಿತ್ತು. ಈ ಸಂಸ್ಥೆ ಜಾಗತಿಕ ಸಂವಹನ ಕ್ರಾಂತಿಗೆ ದೊಡ್ಡ ಕೊಡೆಗೆಯನ್ನು ನೀಡಿದೆ. ಅದರ ಜ್ಞಾಪಕಾರ್ಥವಾಗಿ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. ೧೯೬೯ರಲ್ಲಿ ಜಪಾನ್ ದೇಶದ ಟೋಕಿಯೋ ನಗರದಲ್ಲಿ ನಡೆದ ಯು.ಪಿ.ಯು ಸಮ್ಮೇಳನದಲ್ಲಿ ಅಕ್ಟೋಬರ್ ೯ರಂದು ಮೊದಲ ವಿಶ್ವ ಅಂಚೆ ದಿನವೆಂದು ಘೋಷಿಸಲಾಯಿತು.



ಯು.ಪಿ.ಯು ಯುನೈಟೆಡ್ ನೇಶನ್ಸ್‌ನ ಒಂದು ಅಂಗ ಸಂಸ್ಥೆಯಾಗಿದ್ದು ಪ್ರಪಂಚದಾದ್ಯಂತ ಅಂಚೆ ಜಾಲವನ್ನು ಹೊಂದಿದೆ. ಇದು ವಿಶ್ವದ ಎರಡನೆಯ ಅತ್ಯಂತ ಹಳೆಯ ಅಂತರರಾಷ್ಟ್ರೀಯ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಇದು ೧೯೨ ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ಅಂಚೆ ಸಂವಹನದ ನಿಯಮಾವಳಿಗಳನ್ನು ಈ ಸಂಸ್ಥೆ ನಿರ್ಣಯಿಸುತ್ತದೆ.



ಇಂದು ಬದಲಾವಣೆಯ ಗಾಳಿ ಎಲ್ಲ ರಂಗಗಳಲ್ಲೂ ಬೀಸತೊಡಗಿದೆ. ಇದಕ್ಕೆ ಅಂಚೆ ಸೇವೆಯೂ ಹೊರತಲ್ಲ. ಮನೆಯವರು, ಬಂಧು ಮಿತ್ರರು, ಸ್ನೇಹಿತರು, ಪ್ರೇಮಿಗಳು, ಕೋರ್ಟು ಕಛೇರಿ ವ್ಯವಹಾರಸ್ಥರು ದಿನ-ವಾರ-ತಿಂಗಳುಗಳ ಕಾಲ ತಮ್ಮವರಿಂದ ಬರುವ ಒಂದು ಪತ್ರಕ್ಕಾಗಿ ಕಾಯುವ ಪರಿಸ್ಥಿತಿ ಈಗ ಬಹಳ ವಿರಳವಾಗಿದೆ. ಡಿಜಿಟಲ್ ಕ್ರಾಂತಿಯಿಂದಾಗಿ ಇಂದು ಅಂಚೆ ಕಾಗದಗಳಿಗಾಗಿ ಕಾಯುವ ಪರಿಸ್ಥಿತಿ ಇಲ್ಲ. ದಶಕಗಳ ಹಿಂದೆ ಸ್ಥಿರ ದೂರವಾಣಿ ಸೌಲಭ್ಯ ಮತ್ತು ಕಂಪ್ಯೂಟರ್ ಆಧಾರಿತ ಅಂತರ್ಜಾಲ ವ್ಯವಸ್ಥೆ ಸಂಪರ್ಕಕ್ಕೆ ಹೊಸ ವೇಗವನ್ನು ನೀಡಿದವು. ಆದರೆ ಇವು ಎಲ್ಲರ ಕೈಗೆಟುಕುವ ಸ್ಥಿತಿ ಇರಲಿಲ್ಲ. ಆದರೆ ಇಂದಿನ ಕಾಲಘಟ್ಟದಲ್ಲಿ ನಾವು ಮೊಬೈಲ್, ಸ್ಮಾರ್ಟ್‌ಫೋನುಗಳ ಮೂಲಕ ಸಂಪರ್ಕದ ಹೊಸ ಹೊಸ ದಾರಿಗಳನ್ನು ಕಂಡುಕೊಂಡಿದ್ದೇವೆ. ಕೇವಲ ಇ-ಮೇಲ್‌ಗಳಲ್ಲದೆ, ವಾಟ್ಸಾಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಮುಖಾಂತರ ಸಂಪರ್ಕ ಸಾಧ್ಯವಾಗಿದೆ. ಮೊಬೈಲ್ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಖಾಸಗಿ ಮತ್ತು ಸಾರ್ವಜನಿಕ ಉದ್ದಿಮೆಗಳು ಪೈಪೋಟಿಗೆ ಬಿದ್ದು ದರಗಳನ್ನು ಕಡಿಮೆಗೊಳಿಸುತ್ತಿವೆ. ಹಾಗಾಗಿ ಬಡವರು-ಶ್ರೀಮಂತರೆಂಬ ಭೇದವಿಲ್ಲದೆ ಈ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.



ಸಂಪರ್ಕ ಕ್ಷೇತ್ರದಲ್ಲಾದ ಕ್ಷಿಪ್ರ ಕ್ರಾಂತಿಯಿಂದ ಸಾಂಪ್ರದಾಯಿಕ ಅಂಚೆ ಸೇವೆ ಮಂಕಾಗಿರುವುದು ನಮ್ಮ ಮುಂದಿರುವ ವಾಸ್ತವ. ನಮ್ಮಲ್ಲಿ ಅಂಚೆ ಇಲಾಖೆ ಅಂಚೆ, ಟೆಲಿಗ್ರಾಂ, ಮನಿ ಆರ್ಡರ್, ಕೆಲವು ಹಣ ಉಳಿತಾಯ ಯೋಜನೆಗಳ ಸೀಮಿತತೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಈ ಪೈಕಿ ಕೆಲವು ಸೇವೆಗಳು ನಿಂತು ಹೋಗಿವೆ. ಜಾಗತೀಕರಣದಿಂದ ಜನರಲ್ಲಿ ಕೊಳ್ಳಬಾಕತನ ಹೆಚ್ಚಿದ ಮೇಲೆ ಈ ಬದಲಾವಣೆಯನ್ನು ನಿರ್ವಹಿಸಲು ಬೇಕಾದ ಸಿದ್ಧತೆಗಳು ನಮ್ಮ ಅಂಚೆ ಇಲಾಖೆಯ ಬಳಿ ಇದ್ದಂತಿಲ್ಲ. ಇಂದು ಜನ ಆನ್‌ಲೈನ್ ಶಾಂಪಿಂಗ್ ಮುಖಾಂತರ ವಸ್ತುಗಳನ್ನು ಖರೀಧಿಸುತ್ತಾರೆ. ಅವು ನಿಗದಿತ ಸಮಯಕ್ಕೆ ಕೊಳ್ಳುಗರನ್ನು ತಲುಪುವ ಸೇವೆಗಳು ಲಭ್ಯವಿವೆ. ಈ ಬಗೆಯ ಬದಲಾವಣೆಯನ್ನು ಎದುರಿಸಲು ವಿಶ್ವದ ಕೆಲವು ದೇಶಗಳಲ್ಲಿ ಅಲ್ಲಿನ ಅಂಚೆ ಇಲಾಖೆಗಳು ಖಾಸಗಿ ಸಹಬಾಗಿತ್ವಕ್ಕೆ ಮೊರೆಹೋದ ಉದಾಹರಣೆಗಳೂ ಸಾಕಷ್ಟು ಸಿಗುತ್ತವೆ. ಜಪಾನ್ ಪೋಸ್ಟ್ ಆಸ್ಟ್ರೇಲಿಯಾದ ಟೋಲ್ ಹೋಲ್ಡಿಂಗ್ಸ್ ಎಂಬ ಖಾಸಗಿ ಸಂಸ್ಥೆಯನ್ನು ಖರೀಧಿಸಿತು; ಯುನೈಟೆಡ್ ಸ್ಟೇಟ್ಸ್‌ನ ಅಂಚೆ ಇಲಾಖೆ ಅಮೇಜಾನ್ ಡಾಟ್ ಕಾಂ ಜೊತೆ ಒಪ್ಪಂದ ಮಾಡಿಕೊಂಡಿದೆ; ಆಸ್ಟೇಲಿಯಾದ ಅಂಚೆ ಇಲಾಖೆ ಚೀನಾದ ಆಲಿಬಾಬಾ ಎಂಬ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.



ಇಂತಹ ಎಲ್ಲ ಬದಲಾವಣೆ ಮತ್ತು ಸವಾಲುಗಳ ನಡುವೆ ನಾವು ಮತ್ತೊಮ್ಮೆ ವಿಶ್ವ ಅಂಚೆ ದಿನವನ್ನು ಎದುರುಗೊಳ್ಳುತ್ತಿದ್ದೇವೆ. ಈ ದಿನವನ್ನು ಜನರು ಮತ್ತು ವ್ಯವಹಾರಗಳಲ್ಲಿ ಅಂಚೆಯ ಕೊಡುಗೆಯ ಕುರಿತು ಅರಿವು ಮೂಡಿಸುವುದೇ ಆಗಿದೆ. ಅಂಚೆ ಇಲಾಖೆಗಳು ಎಲ್ಲ ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಕೊಡುಗೆಗಳನ್ನು ನೀಡಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿ ವರ್ಷವೂ ಒಂದೊಂದು ವಿಷಯವನ್ನು ಗುರಿಯಾಗಿಸಿಕೊಡು ವಿಶ್ವ ಅಂಚೆ ದಿನ ಆಚರಿಸಲ್ಪಡುತ್ತದೆ. ಜಾಗತಿಕ ಮಟ್ಟದಲ್ಲಿ ಹಸಿವು, ಬಡತನ, ಅನ್ಯಾಯ, ಹವಾಮಾನ ವೈಪರೀತ್ಯ ಮೊದಲಾದವುಗಳ ವಿರುದ್ಧ ಹೋಡಲು ಇಂಬು ನೀಡುತ್ತಿದೆ ಎಂಬುದು ಈ ದಿನವನ್ನು ಇನ್ನಷ್ಟು ವಿಶಿಷ್ಟವಾಗಿಸಿದೆ.
🙏 *ಮಾಹಿತಿ ವೇದಿಕೆ*🌺

*ಇಂದು ವಿಶ್ವ ಅಂಚೆ ದಿನ*✍

*ವಿಸ್ತರಿಸಲ್ಪಟ್ಟ ಅಂಚೆಸೇವೆಗಳು*✍

*2016- ಇಂಡಿಯಾ ಪೋಸ್ಟ್ ಎಟಿಎಂ ಸೇವೆ*
*1863- ರೈಲ್ವೆ ಮೇಲ್ ಸರ್ವೀಸ್ (ಆರ್​ಎಂಎಸ್)*
*1876- ಪಾರ್ಸಲ್ ಪೋಸ್ಟ್ ಯುನಿಟ್ ಸ್ಥಾಪನೆ*
*1879- ಪೋಸ್ಟ್ ಕಾರ್ಡ್ ಪ್ರಾರಂಭ*
*1880- ಮನಿ ಆರ್ಡರ್ ಸೇವೆ ಆರಂಭ1911- ಮೊದಲ ಏರ್​ವೆುೕಲ್ ಸೇವೆ ಪ್ರಾರಂಭ (ಅಲಹಾಬಾದ್​ನಿಂದ ನೈನಿ)*
*1935- ಭಾರತೀಯ ಪೋಸ್ಟಲ್ ಆರ್ಡರ್ ಶುರು*
*1972- ಪಿನ್​ಕೋಡ್ ಜಾರಿಗೆ*
*1984- ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಆರಂಭ*
*1985- ಪ್ರತ್ಯೇಕವಾದ ಅಂಚೆ ಮತ್ತು ದೂರವಾಣಿ ಇಲಾಖೆಗಳು*
*1986- ಸ್ಪೀಡ್ ಪೋಸ್ಟ್ ಸೇವೆ*
*1990- ಮುಂಬೈ, ಚೆನ್ನೈನಲ್ಲಿ 2 ಸ್ವಯಂಚಾಲಿತ ಅಂಚೆ ಆವೃತ್ತಿ ಸ್ಥಾಪನ*
*1995- ಗ್ರಾಮೀಣ ಅಂಚೆ ವಿಮ*
*1996- ಮೀಡಿಯಾ ಪೋಸ್ಟಲ್ ಸರ್ವೀಸ್*
*1997- ಬ್ಯುಸಿನೆಸ್ ಪೋಸ್ಟಲ್ ಸರ್ವೀಸ್*
*1998- ಡಾಟಾ ಡಾಕ್ ಮತ್ತು ಎಕ್ಸ್​ಪ್ರೆಸ್ ಡಾಕ್ ಸೇವೆ*
*2000- ಗ್ರೀಟಿಂಗ್ ಪೋಸ್ಟ್ ಸೇವೆ*
*2001- ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್​ಫರ್*
*2002- ಇಂಟರ್ನೆಟ್ ಆಧಾರಿತ ಟ್ರ್ಯಾಕ್ ಮತ್ತು ಟ್ಯಾಕ್ಸ್ ಸೇವ*
*2003- ಬಿಲ್ ಮೇಲ್ ಸರ್ವೀಸ್*
*2004- ಇ-ಪೋಸ್ಟಲ್ ಸರ್ವೀಸ್2004- ಲಾಜಿಸ್ಟಿಕ್ ಪೋಸ್ಟ್ ಸರ್ವೀಸ್*

ಅಂಚೆ ಎನ್ನುವ ಹೆಸರು ಹೇಗೆ ಬಂತು ಗೊತ್ತೇ?

ಪ್ರಸ್ತುತದ ಕನ್ನಡ ಭಾಷೆಯಲ್ಲಿ “ಅಂಚೆ” ಎಂದರೆ Postal, ಟಪಾಲು ಎಂಬ ಅರ್ಥವಿದೆ. ಕನ್ನಡ ಪಂಡಿತರ ಅಥವಾ ನಿಘಂಟುಗಳ ಮೊರೆ ಹೋದರೆ “ಅಂಚೆ” ಎಂಬ ಪದಕ್ಕೆ ‘ಹಂಸ’ ಎಂಬ ಅರ್ಥ ಸಿಗುತ್ತದೆ. ಹಂಸ ನೀರಿನಲ್ಲಿರುವ ಬಾತುಕೋಳಿಯ ಇನ್ನೊಂದು ಹೆಸರು. ಆದರೆ, ಟಪಾಲು/Postal ವಿಭಾಗಕ್ಕೆ ‘ಅಂಚೆ’ ಎಂಬ ಹೆಸರು ಹೇಗೆ ಬಂತೆಂಬುದರ ಹಿಂದೆ ಸ್ವಾರಸ್ಯಕರ ಸಂಗತಿ ಒಂದಿದೆ.

ಹೌದು, ಕ್ರಿ. ಶ. 1672 ರವರೆಗೆ ‘ಅಂಚೆ’ ಎಂಬುದರ ಅರ್ಥ ‘ಹಂಸ’ ಮಾತ್ರ. ಅಂದಿಗೆ ಕನ್ನಡ ನಾಡು (ಕನ್ನಡ ಮಾತನಾಡುವ ರಾಜ್ಯ) ಎನಿಸಿಕೊಂಡಿದ್ದ ಮೈಸೂರು ಸಂಸ್ಥಾನದ ದೊರೆಗಳಾದ ಶ್ರೀ ಚಿಕ್ಕದೇವರಾಜ ಒಡೆಯರ್ ಅವರು ರಾಜ್ಯದ Postal Department/ಟಪಾಲು ವಿಭಾಗವನ್ನು ಸ್ಥಾಪಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದ್ದರು.

ಈ ವಿಭಾಗಕ್ಕೆ ಹೆಸರೇನಿಡಬೇಕೆಂಬ ವಿಚಾರ ಬಂದಾಗ ಅವರ ತಲೆಗೆ ಹೊಳೆದದ್ದು ನಮ್ಮ ಪುರಾಣಗಳಲ್ಲಿ ಅಮರ ಪ್ರೇಮಿಗಳೆನಿಸಿಕೊಂಡ ನಳ-ದಮಯಂತಿಯರು. ಈ ಪ್ರೇಮಿಗಳ ನಡುವೆ ಪ್ರೀತಿಯ ಸಂಕೇತ ಹಾಗೂ ಸಂದೇಶ ವಾಹಕವಾಗಿದ್ದ ‘ಹಂಸೆ’ ಅಥವಾ ‘ಅಂಚೆ’ ಯನ್ನು ಮೈಸೂರು ರಾಜ್ಯದ Postal ವಿಭಾಗದ ಹೆಸರಾಗಿ ಆಯ್ಕೆ ಮಾಡಲಾಯಿತು. ಹೀಗೆ ಅಂದು ನಾಮಕರಣಗೊಂಡ ‘ಅಂಚೆ ವಿಭಾಗ’ ಕನ್ನಡದಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿದೆ. ಅಬ್ಬಾ!! ರಾಜ್ಯದ ವ್ಯವಸ್ಥೆಯ ಒಂದು ವಿಭಾಗಕ್ಕೆ ಎಂತಹ ರೋಮಾಂಚನೀಯ, ಭಾವನಾತ್ಮಕ ಹೆಸರು!!

ಒಂದು ಸ್ಥಳವಾಗಲಿ, ರಸ್ತೆಯಾಗಲಿ, ಯೋಜನೆಯಾಗಲಿ ಅಥವಾ ವ್ಯವಸ್ಥೆಯ ವಿಭಾಗವಾಗಲಿ, ಹೆಸರಿಡುವುದರಲ್ಲಿ ಎಷ್ಟು ಸೃಜನಶೀಲ ಹಾಗೂ ಭಾವನಾತ್ಮಕವಾಗಿರಬೇಕೆಂಬುದಕ್ಕೆ ಇದು ಒಳ್ಳೆಯ ಉದಾಹರಣೆ.

ಈ ವಿಷಯವನ್ನು ನಾನು ಓದುತ್ತಿರುವಾಗ, 10ನೇ ತರಗತಿಯಲ್ಲಿ ಕನ್ನಡದ ಮೇಷ್ಟ್ರು ಹೇಳಿಕೊಟ್ಟ ತತ್ಸಮ-ತದ್ಭವ ಪಾಠಗಳು ನೆನಪಾದವು. ‘ಹಂಸ’ ಎಂಬುದು ಸಂಸ್ಕ್ರತ ಪದ. ರೂಪಾಂತರಗೊಂಡು ಕನ್ನಡಕ್ಕೆ ಬಂದಾಗ ‘ಅಂಚೆ’ಯಾಯಿತು.
ವ್ಯವಸ್ಥೆಯ ಒಂದು ವಿಭಾಗಕ್ಕೆ ಅದನ್ನು ಹೆಸರಾಗಿ ಬಳಸಿಕೊಂಡಾಗ ಕಾಲಕ್ರಮೇಣ ಮೂಲ ಅರ್ಥವೇ ಕಳೆದು ಹೊಸ ಅರ್ಥ ಬಂದಂತಿದೆ. ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ಭಾಷೆಯ ಮೇಲೆ ಬೀರುವ ಪರಿಣಾಮಗಳಿಗೆ ‘ಅಂಚೆ’ ಕೈಗನ್ನಡಿಯಂತಿದೆ. ಇದೇ ಅಲ್ಲವೇ ಭಾಷೆಯ ವಿಕಸನ!

ಶೃತಿ ಹೆಚ್ ಎಂ


ಭಾರತಾಂಬೆಯ ಹೆಮ್ಮೆಯ ಪುತ್ರ ಡಾ.ಎಪಿಜೆ ಅಬ್ದುಲ್ ಕಲಾಂ"

 


"ಭಾರತಾಂಬೆಯ ಹೆಮ್ಮೆಯ ಪುತ್ರ ಡಾ.ಎಪಿಜೆ ಅಬ್ದುಲ್ ಕಲಾಂ"

ಅವರೊಬ್ಬ ಕರ್ಮಯೋಗಿ. ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ. ಮಹಾ ಮೇಧಾವಿ. ಅವರು ಈ ದೇಶ ಕಂಡ ಅತ್ಯುತ್ತಮ ವಿಜ್ನಾನಿಗಳಲ್ಲೊಬ್ಬರು. ಚಿಕ್ಕ ಮಕ್ಕಳಿಂದ ಆರಂಭವಾಗಿ ಐಐಟಿ, ಐಐಎಂ ವಿದ್ಯಾರ್ಥಿಗಳಿಗೆಲ್ಲರಿಗೂ ಅಚ್ಚುಮೆಚ್ಚಿನ ಗುರು, ಶಿಕ್ಷಕ. ಸಹನೆ, ಸರಳತೆ, ಸಜ್ಜನಿಕೆಗೆ ಅತ್ಯುತ್ತಮ ಉದಾಹರಣೆ. ಅವರು ಭಾರತದ 11ನೇ ರಾಷ್ಟ್ರಪತಿಯಾಗಿದ್ದರು. ಕೋಟ್ಯಾಂತರ ಯುವಕರಿಗೆ ಕನಸುಗಳನ್ನು ಕಟ್ಟಿಕೊಟ್ಟ, ದೇಶಕ್ಕಾಗಿ ದುಡಿಯಲು ಅವರಿಗೆ ಸದಾ ಪ್ರೇರಣೆ ನೀಡುತ್ತಿದ್ದ ಒಬ್ಬ ಮಹಾನ್ ನಾಯಕ. ಅವರೇ ಭಾರತದ ಮಿಸ್ಸೈಲ್ ಮ್ಯಾನ್, ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ..

15 ಅಕ್ಟೋಬರ್ 1931 ರಂದು ರಾಮೇಶ್ವರದ ಬಡ ಕುಟುಂಬದಲ್ಲಿ ಹುಟ್ಟಿದ ಕಲಾಂ, ದಿನ ಪತ್ರಿಕೆ ಹಂಚುತ್ತಲೇ ತಮ್ಮ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡರು; ದೇಶಕ್ಕೂ ಹೊಸ ಕನಸುಗಳನ್ನು ಕೊಟ್ಟರು. ಅದನ್ನು ನನಸು ಮಾಡುವುದಕ್ಕೆ ದುಡಿದರು. ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ ಡಾಕ್ಟೊರೆಟ್ ಪದವಿ ಗಳಿಸಿದರು. ಡಿಆರ್‌ಡಿಒ ಮತ್ತು ಇಸ್ರೋದಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿದರು. ಇಡೀ ವಿಶ್ವವೇ ಭಾರತದತ್ತ ಬೆರಗುಕಣ್ಣುಗಳಿಂದ ನೋಡುವಂತಹ ಸಾಧನೆಗಳನ್ನು ಮಾಡಿದರು. ಭಾರತದ ಅತ್ಯುನ್ನತ ನಾಗರಿಕ ಗೌರವವಾದ 'ಭಾರತರತ್ನ' ಪ್ರಶಸ್ತಿಗೆ ಅವರು ಪಾತ್ರರಾಗಿದ್ದರು. ಇದಲ್ಲದೆ ಪದ್ಮ ಭೂಷಣ ಕೂಡ ಅವರಿಗೆ ಒಲಿದು ಬಂದಿತ್ತು, ಇದಲ್ಲದೆ ಹಲವಾರು ವಿಶ್ವವಿದ್ಯಾಲಯಗಳು ಸುಮಾರು 40 ಕ್ಕೂ ಹೆಚ್ಚು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿವೆ. ಬ್ರಹ್ಮಚಾರಿಯಾಗಿದ್ದ ಅವರು, ತಮ್ಮ ಇಡೀ ಜೀವನವನ್ನು ಅಧ್ಯಯನ, ಸಂಶೋಧನೆ, ಬಾಹ್ಯಾಕಾಶ ಕಾರ್ಯಕ್ರಮಗಳ ಯೋಜನೆಗಳಿಗೆ ಮೀಸಲಿಟ್ಟರು.

1998 ರಲ್ಲಿ ಅಮೆರಿಕಾ ಸಹಿತ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿದ ಭಾರತದ ಫೋಖ್ರಾನ್-2 ಅಣ್ವಸ್ತ್ರ ಪರೀಕ್ಷೆಯ ವಿಚಾರದಲ್ಲಂತೂ ಡಾ.ಅಬ್ದುಲ್ ಕಲಾಂ ಅವರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು. ಪ್ರಥಮ ಅಣು ಪರೀಕ್ಷೆ 1974ರಲ್ಲಿ ನಡೆಡಿತ್ತು. ಅ ನಂತರ ತೀವ್ರವಾದ ಅಂತಾರಾಷ್ಟ್ರೀಯ ವಿರೋಧ, ಅದರಲ್ಲೂ ಮುಖ್ಯವಾಗಿ ಅಮೆರಿಕದ ನಿರಂತರ ಒತ್ತಡಗಳ ನಡುವೆಯೂ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಣು ಪರೀಕ್ಷೆ ನಡೆಸಲು ಕೈಗೊಂಡ ನಿರ್ಧಾರಕ್ಕೆ ಇಡೀ ವಿಶ್ವವೇ ದಂಗಾಗಿ ಹೋಯಿತು, ಮಾತ್ರವಲ್ಲ, ಭಾರತ ಒಂದು ಅಣ್ವಸ್ತ್ರ ಹೊಂದಿದ ದೇಶ ಎಂಬುದನ್ನೂ ಇತರ ದೇಶಗಳು ಒಲ್ಲದ ಮನಸ್ಸಿನಿಂದ ಒಪ್ಪುವಂತಾಯಿತು, ಹಾಗೂ ಭಾರತ ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲೊಂದಾಗಿ ಮಾರ್ಪಾಡು ಹೊಂದಿತು, ವಿಶ್ವ ಮನ್ನಣೆ ಗಳಿಸಲಾರಂಭಿಸಿತು.

2002ರಲ್ಲಿ ಡಾ.ಅಬ್ದುಲ್ ಕಲಾಂ ಅವರು ಅಂದಿನ ಸರಕಾರ ನಡೆಸುತ್ತಿದ್ದ ಬಿಜೆಪಿ ಹಾಗೂ ವಿಪಕ್ಷಗಳ ಬೆಂಬಲದೊಂದಿಗೆ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಐದು ವರ್ಷಗಳ ಸೇವೆ ಸಲ್ಲಿಸಿ ಅವರು ನಾಗರಿಕ ಜೀವನಕ್ಕೆ ಮರಳಿ ವಿದ್ಯಾಭ್ಯಾಸ, ಬರವಣಿಗೆ ಮತ್ತು ಜನಸೇವೆಯಲ್ಲಿ ತೊಡಗಿಕೊಂಡರು.

ಡಾ.ಅಬ್ದುಲ್ ಕಲಾಂರವರು,ಜುಲೈ 27, 2015 ರಂದು ಶಿಲ್ಲಾಂಗ್ ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಕೊನೆಯ ಉಸಿರು ಇರುವವರೆಗೂ ಅವರು ಸೇವೆಯಲ್ಲಿ ನಿರತರಾಗಿದ್ದು, ಇಡೀ ದೇಶದ ಜನತೆಗೆ ಮಾದರಿಯ ವ್ಯಕ್ತಿತ್ವ.

ಅಬ್ದುಲ್ ಕಲಾಂ ಅವರ ಜನ್ಮ ದಿನದ ಶುಭಾಶಯಗಳೊಂದಿಗೆ ಅವರ...
ಅವರ‌ಹಿತ ನುಡಿಗಳು

ಅಬ್ದುಲ್ ಕಲಾಂ ದೇಹ ನಮ್ಮಿಂದ ದೂರವಾಗಿದ್ದರೂ ಅವರ ಸಾಧನೆ, ವ್ಯಕ್ತಿತ್ವಗಳು ನಮಗೆ ಸದಾ ಮಾರ್ಗದರ್ಶನ ಮಾಡುತ್ತಲೇ ಇರುತ್ತವೆ. ಅವರು ಬದುಕಿನ ಕೊನೆಯ ಘಳಿಗೆಯವರೆಗೂ ಮಾರ್ದರ್ಶಕರಾಗೇ ಬದುಕಿ ಸೈ ಎನಿಸಿದರು.
ಅವರ ಅನುಭವದಲ್ಲಿ ಬಂದ ವಿವೇಕಯುಕ್ತ ಮಾತುಗಳು ನಮ್ಮ ಜೀವನಕ್ಕೆ ಅತ್ಯುತ್ತಮ ಮಾರ್ಗದರ್ಶನ ನೀಡಬಲ್ಲವು.

1) ನಿನ್ನ ಕನಸು ನನಸಾಗಬೇಕಿದ್ದರೆ.. ಮೊದಲು ನೀನು ಕನಸು ಕಾಣು..

2) ನಿದ್ದೆಯಲ್ಲಿ ಕಾಣುವುದಲ್ಲ .. ನಿದ್ದೆಗೆಡಿಸಿ ಕಾಡುವುದು

3) ಯಶಸ್ಸನ್ನು ಅನುಭವಿಸಬೇಕಿದ್ದರೇ ಕಷ್ಟಗಳು ತುಂಬಾ ಮುಖ್ಯ

4) ನಮ್ಮ ಸಹಿ ಹಸ್ತಾಕ್ಷರವಾಗಿ ಬದಲಾಗುವುದೇ ಯಶಸ್ಸು..

5) ಸೋಲಿನ ಕತೆಗಳನ್ನು ಓದುವುದರಿಂದ ಗೆಲುವಿನ ಹಾದಿ ತಿಳಿಯುತ್ತದೆ ..

6) ಸೋಲೆಂಬ ರೋಗ ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು..

7) ನಮ್ಮ ಮಕ್ಕಳ ಉತ್ತಮ ನಾಳೆಗಾಗಿ ನಮ್ಮ ಇಂದನ್ನು ತ್ಯಾಗ ಮಾಡೋಣ..

8) ಯಾವುದೇ ಸಮಸ್ಯೆಗೂ ಯುದ್ಧ ಅಂತಿಮ ಪರಿಹಾರವಲ್ಲ..

9) ಅತೀ ಸಂತೋಷ ಅಥವಾ ಅತೀ ದುಃಖವಾದಾಗ ಮಾತ್ರ ಕವನ ಸೃಷ್ಟಿ

10) ಯುವಕರು ಕೆಲಸ ಹುಡುಕಬಾರದು.. ಕೆಲಸ ಉತ್ಪಾದಕರಾಗಬೇಕು

11) ವಿಜ್ಞಾನ ಮಾನವೀಯತೆಗೆ ಸುಂದರ ಉಡುಗೊರೆ. ನಾವು ಅದನ್ನು ವಿರೂಪಗೊಳಿಸಬಾರದು

12) ಮಳೆ ಬಂದಾಗ ಎಲ್ಲ ಹಕ್ಕಿಗಳು ಮರದ ಆಶ್ರಯ ಪಡೆಯುತ್ತವೆ. ಆದರೆ ಹದ್ದುಗಳು ಮೋಡದಿಂದಲೂ ಮೇಲಕ್ಕೆ ಹೋಗಿ ಹಾರಾಡುತ್ತವೆ. ಸಮಸ್ಯೆ ಎಲ್ಲರಿಗೂ ಇದೆ. ಆದರೆ ಅದನ್ನು ಹೇಗೆ ಎದುರಿಸ್ತೀರಿ ಎನ್ನುವುದು ಮುಖ್ಯ

13) ಯಾವುದರಲ್ಲೂ ತೊಡಗಿಸಿಕೊಳ್ಳದೇ ಇದ್ದರೆ ನೀವು ಯಶಸ್ವಿಯಾಗಲ್ಲ. ತೊಡಗಿಸಿಕೊಂಡರೆ ಯಾವುದೇ ಕಾರಣಕ್ಕೂ ಸೋಲಲ್ಲ

14) ನಮಗೆಲ್ಲರಿಗೂ ಒಂದೇ ಪ್ರತಿಭೆ ಹೊಂದಿಲ್ಲ. ಆದರೆ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಎಲ್ಲರಿಗೂ ಸಮಾನ ಅವಕಾಶವಿರುತ್ತೆ

15) ಸೂರ್ಯನಂತೆ ಪ್ರಜ್ವಲಿಸಬೇಕಿದ್ದರೆ, ಸೂರ್ಯನಂತೆ ಮೊದಲು ಉರಿಯಬೇಕು

16) ನಿಮ್ಮ ಮೊದಲ ಜಯದ ನಂತರ ವಿಶ್ರಾಂತಿ ಪಡೆಯಬೇಡಿ. ಯಾಕಂದ್ರೆ ನೀವು ಎರಡನೇ ಬಾರಿ ಸೋತರೆ, ಮೊದಲನೇ ಜಯ ಬರೀ ಅದೃಷ್ಟ ಎಂದು ತೆಗಳುವವರು ಹೆಚ್ಚು ಇರುತ್ತಾರೆ

17) ಕೆಲವರನ್ನು ಸೋಲಿಸುವುದು ಭಾರೀ ಸುಲಭ. ಆದ್ರೆ ಕೆಲವರನ್ನು ಗೆಲ್ಲುವುದು ಭಾರೀ ಕಷ್ಟ

18) ನೀವು ಮಾಡುವ ಕೆಲಸವನ್ನು ಪ್ರೀತಿಸಿ, ಶ್ರದ್ಧೆಯಿಂದ ಕೆಲಸ ಮಾಡಿ ಆತ್ಮಶುದ್ಧಿ ಮಾಡಿಕೊಳ್ಳಿ..

19) ನಿಮ್ಮ ಭವಿಷ್ಯ ಬದಲಾಗಬೇಕಾದ್ರೆ, ಮೊದಲು ನಿಮ್ಮ ಹವ್ಯಾಸಗಳನ್ನು ಬದಲಿಸಿಕೊಳ್ಳಿ..

20) ಸ್ಪಷ್ಟ ಗುರಿ.. ವಿಷಯ ಜ್ಞಾನ.. ನಿರಂತರ ಶ್ರಮ.. ಅಧ್ಯಯನ ಶೀಲತೆ

21) ಜೀವನ ಮತ್ತು ಸಮಯ ನಮ್ಮ ಉತ್ತಮ ಶಿಕ್ಷಕರು

22) ಜೀವನ ನಮ್ಮ ಗುರಿಯನ್ನು ನಿರ್ದೇಶಿಸುತ್ತದೆ. ಸಮಯ ಜೀವನದ ಮೌಲ್ಯವನ್ನು ನಿರ್ಧರಿಸುತ್ತದೆ

23) ನಾವು ಸ್ವತಂತ್ರರಾಗದಿದ್ದರೆ, ಯಾರೂ ಗೌರವಿಸುವುದಿಲ್ಲ

24) ನಿನ್ನ ತಪ್ಪುಗಳೇ ನಿನ್ನ ನಿಜವಾದ ಗುರು
                   
#ಜನ್ಮದಿನದ_ಶುಭಾಶಯಗಳು_ಕಲಾಂ_ಜಿ

ಕನಕದಾಸ ಜಯಂತಿ

 ಕನಕದಾಸ ಜಯಂತಿ















ಕನಕದಾಸರು (1509-1609) ಕರ್ಣಾಟಕದ ಹೆಸರಾಂತ ಕವಿ, ಸಂಗೀತಗಾರ, ವಾಗ್ಗೇಯಕಾರರು, ವೇದಾಂತಿಗಳು. ಇವರು ದ್ವೈತ ಮದ್ವ ತತ್ವವನ್ನು ತಮ್ಮ ರಚನೆಗಳಲ್ಲಿ ಅಳವಡಿಸಿ , ಹಾಡಿ ಜನರಿಗೆ ಪ್ರಚಾರ ಮಾಡಿದರು. ಇವರು ಸುಮಾರು ೨೫೦ ಕೃತಿಗಳನ್ನು ರಚಿಸಿದ್ದಾರೆ. ನಳಚರಿತ್ರೆ , ಹರಿಭಕ್ತಿಸಾರ, ರಾಮಧಾನ್ಯಚರಿತೆ, ಮೋಹನತರ೦ಗಿಣಿ, ನೃಸಿ೦ಹಾಷ್ಟವ - ಇವು ಪ್ರಮುಖರಚನೆಗಳು. ಕನಕದಾಸರ ಊರು ಹಾವೇರಿ ಜಿಲ್ಲೆಯ ಕಾಗಿನೆಲೆ. ಇವರು ಕಾಗಿನೆಲೆ ಆದಿಕೇಶವ ಎಂಬ ಅಂಕಿತವನ್ನುತಮ್ಮ ಕೀರ್ತನೆಗಳಲ್ಲಿ ಉಪಯೋಗಿಸಿದ್ದಾರೆ.





ತಿಮ್ಮಪ್ಪನಾಯಕ ಇವರ ಮೊದಲಿನ ಹೆಸರು. ಇವರು ದಂಡನಾಯಕನಾಗಿದ್ದು ಯಾವುದೋ ಯುಧ್ಧದಲ್ಲಿ ತೀವ್ರ ಗಾಯವಾದರೂ ,ಬದುಕುಳಿದರಂತೆ. ಇದಾದ ನಂತರ ಅವರು ಯುದ್ಧವನ್ನು ಬಿಟ್ಟು , ದೇವರ ಧ್ಯಾನದಲ್ಲಿ ತೊಡಗಿದರು ಎಂದು ಹೇಳುತ್ತಾರೆ. ಶ್ರೀ ವ್ಯಾಸರಾಯರು ಇವರನ್ನು ತಮ್ಮ ಶಿಷ್ಯನಾಗಿ ಮಾಡಿಕೊಂಡು ಕನಕದಾಸ ಎಂದು ಹೆಸರಿಟ್ಟರು. ಇವರ ಕೀರ್ತನೆಗಳು ಆ ಕಾಲದ ದಿನ ನಿತ್ಯ ಜೀವನದ ಸಂಗತಿಗಳನ್ನು ನಿರೂಪಿಸುತ್ತದೆ. ಜಾತಿಪದ್ಧತಿಯ ತಾರತಮ್ಯಗಳನ್ನು ಖಂಡಿಸಿದ್ದಾರೆ.ಬರೀ ಸಂಪ್ರದಾಯದ ಆಚರಣೆಗಳು ನಿಷ್ಪ್ರಯೋಜಕ, ನೈತಿಕ ಮೌಲ್ಯಗಳನ್ನು ಬೆಲೆಸಿಕೊಳ್ಳುವುದು ಮುಖ್ಯ ಎಂದು ಕನಕದಾಸರು ಹೇಳುತ್ತಾರೆ.




ಕುರುಬ ಜನಾಂಗಕ್ಕೆ ಸೇರಿದ ಇವರಿಗೆ ಉಡುಪಿಯ ದೇವಸ್ಥಾನದಲ್ಲಿ ಅವರಿಗೆ ಪ್ರವೇಶ ದೊರೆಯದಿದ್ದಾಗ, ದೇವಸ್ಥಾನದ ಹಿ೦ದೆ ನಿ೦ತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎಂದು ಹಾಡತೊಡಗಿದರ೦ತೆ . ಆಗ ದೇವಸ್ಥಾನದ ಹಿಂದಿನ ಗೋಡೆ ಒಡೆದು ಶ್ರೀ ಕೃಷ್ಣನು ದರ್ಶನ ಕೊಟ್ಟನಂತೆ. ಈ ಬಿರುಕಾದ ಗೋಡೆಯನ್ನು ಕನಕನ ಕಿಂಡಿ ಎ೦ದು ಕರೆಯಲಾಗಿದೆ. ಈಗಲೂ ಉಡುಪಿ ಕೃಷ್ಣನ ದೇವಸ್ಥಾನದಲ್ಲಿ ಇದನ್ನು ನೋಡಬಹುದು.




ಇವರ ದೇವರನಾಮಗಳು ಕರ್ನಾಟಕ ಸಂಗೀತಹಾಗು ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಈಹಾಡನ್ನು ಇಂದಿಗೂ ನಾವೆಲ್ಲ ಕೇಳುತ್ತೀವಿ,ಹಾಡುತ್ತೀವಿ. ಇವರು ಕೊಟ್ಟಿರುವ ಸಂದೇಶಇಂದಿಗೂ ಪ್ರಸ್ತುತ.

ರಾಗ – ಮುಖಾರಿ ತಾಳ – ಏಕ


ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವ

ತೊರೆದು ಜೀವಿಸಬಹುದೆ || ಪ ||


ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ

ಕರಪಿಡಿದೆನ್ನನು ಕಾಯೊ ಕರುಣಾನಿಧಿ || ಅ.ಪ ||


ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು

ದಾಯಾದಿ ಬಂಧುಗಳ ಬಿಡಲು ಬಹುದು

ರಾಯ ಮುನಿದರೆ ರಾಜ್ಯವ ಬಿಡಬಹುದು

ಕಾಯಜಪಿತ ನಿನ್ನಡಿಯ ಬಿಡಲಾಗದು || ೧ ||


ಒಡಲು ಹಸಿದರೆ ಅನ್ನವ ಬಿಡಬಹುದು

ಪಡೆದ ಕ್ಷೇತ್ರವ ಬಿಟ್ಟು ಹೊರಡಲು ಬಹುದು

ಮಡದಿ ಮಕ್ಕಳ ಕಡೆಗೆ ತೊಲಗಿಸಿಬಿಡಬಹುದು

ಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗದು || ೨ ||


ಪ್ರಾಣವ ಪರರಿಗೆ ಬೇಡಿದರೆ ಕೊಡಬಹುದು

ಮಾನಾಭಿಮಾನವ ತಗ್ಗಿಸಬಹುದು

ಪ್ರಾಣದಾಯಕನಾದ ಆದಿಕೇಶವರಾಯ

ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು || ೩ ||








ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು ಐದು ನೂರು ವರ್ಷಗಳ ಭವ್ಯ ಇತಿಹಾಸವಿದೆ. ಕನಕದಾಸರಂಥ ವೈಚಾರಿಕ ಸಂತರಿಂದಾಗಿ ಸಮಾಜದ ಮೇಲು-ಕೀಳು, ಜಾತಿ-ಮತಗಳ ಸಿದ್ಧಾಂತ ಬದಿಗೆ ಸರಿಯಿತು. ದೇವಸ್ತುತಿಯೇ ಮುಖ್ಯವೆನಿಸಿದ್ದ ಭಕ್ತಿ ಪರಂಪರೆಯ ಕಾಲದಲ್ಲಿ ಧ್ರುವತಾರೆಯಂತೆ ಅವತರಿಸಿದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದರು.


ದಾಸ ಸಾಹಿತ್ಯದ ಮೂಲಕ ಸಾಹಿತ್ಯವನ್ನು ಇನ್ನಷ್ಟು ಸರಳಗೊಳಿಸಿದ, ಕನ್ನಡ ಸಾಹಿತ್ಯಕ್ಕೆ ಹೊಸತನ ತುಂಬಿದ ಕನಕದಾಸರನ್ನು ಹೊಸಗನ್ನಡ ಸಾಹಿತ್ಯ ಕೋಗಿಲೆ ಎಂದು ದಾಸ ಸಾಹಿತ್ಯ ಬಸವ ಕೋಗಿಲೆ ಎಂದು ಪ್ರಾಜ್ಞರು ಕರೆದುದುಂಟು. ಕನ್ನಡ ಸಾಹಿತ್ಯದಲ್ಲಿ 16ನೇ ಶತಮಾನದ ದಾಸ ಸಾಹಿತ್ಯ ಹೆಚ್ಚು ಜನಮುಖಿಯಾದವು. ಜಾತಿ-ನೀತಿಯ ಉಡದ ಪಟ್ಟಿನ ನಡುವೆಯೂ ಕನಕದಾಸರು, ಜನತೆಯಲ್ಲಿ ಸಾಮಾಜಿಕ ಚಿಂತನೆ, ಕಾವ್ಯ ಮತ್ತು ಕೀರ್ತನೆಗಳ ಮೂಲಕ ಸಾಹಿತ್ಯ ಹಾಗೂ ಸಂಗೀತಕ್ಕೆ ಮಹತ್ತರ ಕಾಣಿಕೆ ಸಲ್ಲಿಸಿ, ದಾಸ ಸಾಹಿತ್ಯದ ತೂಕವನ್ನು ಮತ್ತಷ್ಟು ಹೆಚ್ಚಿಸಿದರು.

ವಿಶ್ವಬಂಧು, ಸಂತ ಕವಿ ಕನಕದಾಸರು

ಕನಕದಾಸರು (1508-1606) ಸಾಮಾನ್ಯವಾದ ಕುರುಬ ಜಾತಿಯಲ್ಲಿ ಹುಟ್ಟಿದರೂ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದ ಹಿರಿಮೆ ಗಳಿಸಿದವರು. ಕನಕರು ಕೆಳಸ್ತರದಿಂದ ಬಂದವರಾದ್ದರಿಂದ, ಕೆಳಜಾತಿಯವರ ನೋವಿನ ಅರಿವು ಹಾಗೂ ಡಣ್ಣಾಯಕ (ಒಂದು ಪ್ರದೇಶದ ಮುಖ್ಯಸ್ಥ) ರಾಗಿದ್ದರಿಂದ ಮೇಲ್ವರ್ಗದ ಜೀವನದ ಅನುಭವ ಅವರದಾಗಿತ್ತು.



5ನೆಯ ಶತಮಾನದಲ್ಲಿ ವಿಜಯನಗರ ಆಡಳಿತಕ್ಕೆ ಒಳಪಟ್ಟ ಬಾಡ ಪ್ರದೇಶ (ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ಮತ್ತು ಬಂಕಾಪುರ ಪ್ರದೇಶ) ಅಂದಿನ 28 ಗ್ರಾಮಗಳ ಹೋಬಳಿಯಾಗಿತ್ತು. ಅದರ ನಾಡಗೌಡಿಕೆ ಮತ್ತು ಹೊಣೆಗಾರಿಕೆಯನ್ನು ವಿಜಯನಗರದ ಅರಸರು ತಿಮ್ಮಪ್ಪನ ಹೆಗಲಿಗೇರಿಸಿದರು. ಕಾಲಾಂತರದಲ್ಲಿ ಡಣ್ಣಾಯಕತ್ವ ಕನಕನ ಕೈತಪ್ಪಿ ಹೋಯಿತು. ಆದರೂ ಈತನ ನಿಯತ್ತು ನಿ:ಸ್ವಾರ್ಥತನಕ್ಕೆ ಮತ್ತೆ ಅದು ಈತನ ಮುಡಿಗೇರಿತು. ಈ ನಡುವೆ ಕನಕನಿಗೆ ಮದುವೆಯಾಗಿ, ಪುತ್ರ ಭಾಗ್ಯ ಉಂಟಾಯಿತು.


ಕಾಲನ ಆಟದಲ್ಲಿ ಕೆಲ ಕಾಲದಲ್ಲೇ ಕನಕ ಮಗು ಮತ್ತು ತಾಯಿಯನ್ನು ಕಳೆದುಕೊಂಡ. ಕನಕ ಈ ನೋವಿನಿಂದ ಹೊರಬಂದು, ಲೌಕಿಕತೆಯಿಂದ ಪಾರಮಾರ್ಥಿಕದತ್ತ ತಿರುಗಿದ. ಭೌತಿಕ, ಆಸೆ ಆಕಾಂಕ್ಷೆಗಳಿಂದ ದೂರವಾದ. ಈ ಹಂತದಲ್ಲೇ ಕನಕಪ್ಪ ಬಾಡದಿಂದ, ತಾನು ನಂಬಿ ಪೂಜಿಸುತ್ತಿದ್ದ ದೈವ ಬಾಡದ ಆದಿಕೇಶವನನ್ನು ಕಾಗಿನೆಲೆಗೆ ತಂದು ಪ್ರತಿಷ್ಠಾಪಿಸಿಯಾಗಿತ್ತು. ಆತನ ಆರಾಧನೆಯಲ್ಲಿ ಸಂತೋಷ ಕಾಣುತ್ತ, ತನ್ನ ಕಾವ್ಯ ಕೃಷಿ ಮುಂದುವರಿಸಿದರು.


ಒಂದು ದಿನ ಭೂಮಿ ಅಗೆಯುತ್ತಿದ್ದಾಗ, ಅಲ್ಲಿ ನಿಧಿಯೊಂದು ಸಿಕ್ಕಿತು. ಕನಕರು ಈ ನಿಧಿಯನ್ನು ದೇವಸ್ಥಾನಗಳ ಜೀರ್ಣೋದ್ಧಾರ, ಬಡಬಗ್ಗರಿಗೆ ಪ್ರಸಾದಕ್ಕೆ ಬಳಸಿ, ತಮ್ಮ ಲೋಕಕಲ್ಯಾಣ ಗುಣ ಮೆರೆದರು. ಆ ದಿನ ಕನಕಪ್ಪನನ್ನು ಬಾಡ ನಾಡಿನ ಜನ ಕನಕದಾಸನೆಂದು ಕರೆಯಲಾರಂಭಿಸಿದರು. ಕನಕರು ಬಾಳಿದ ಕಾಲ, ವಿಜಯನಗರದಲ್ಲಿ ಶ್ರೀ ಕೃಷ್ಣದೇವರಾಯ ಆಳ್ವಿಕೆ ಮಾಡುತ್ತಿದ್ದ ಕಾಲ (1509). ಕನಕರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ತಿರುಮಲೆ ತಾತಾಚಾರಿ ಅವರನ್ನು, ನಂತರ ಹಂಪಿಯಲ್ಲಿ ವ್ಯಾಸರಾಯರನ್ನು ಭೇಟಿ ಮಾಡಿದರು. ವ್ಯಾಸರಾಯರನ್ನು ಗುರುವಾಗಿ ಸ್ವೀಕರಿಸಿ, ವೇದ ಉಪನಿಷತ್ತು, ವೈಷ್ಣವ ಮತ-ಧರ್ಮ ಕುರಿತಾದ ಜ್ಞಾನ ಸಂಪಾದಿಸಿದರು. ಗುರು ವ್ಯಾಸರಾಯರು ಕನಕರ ಯೋಗ್ಯತೆಯನ್ನು ಗುರುತಿಸಿ, ಪ್ರೀತಿಯಿಂದ ಕಂಡು, ಅವರ ಯೋಗ್ಯತೆಯನ್ನು ಹಲವು ಬಾರಿ ಜಾಹಿರುಗೊಳಿಸಿದ ಅನೇಕ ಪ್ರಸಂಗಗಳು ನಡೆದವು.
ಕನಕದಾಸರು ಹರಿಭಕ್ತರಾಗಿ, ದಾಸರಾಗಿ ನಂಜನಗೂಡು, ಬೇಲೂರು, ಉಡುಪಿ ಮತ್ತಿತರೆಡೆಗಳಲ್ಲಿ ಸುತ್ತಾಡಿ, ತಮ್ಮ ಕೀರ್ತನೆಗಳ ಮೂಲಕ ಜನರ ಅಜ್ಞಾನ ಹೋಗಲಾಡಿಸುತ್ತಿದ್ದರು. ಶ್ರೀ ಕೃಷ್ಣನ ದರ್ಶನ ಮಾಡಬೇಕೆಂಬ ಇಚ್ಚೆಯಿಂದ ಕನಕದಾಸರು ಉಡುಪಿಗೆ ಬಂದಾಗ, ಅಲ್ಲಿನ ಪುರೋಹಿತರು ಕನಕದಾಸರ ಉಡುಗೆ ತೊಡುಗೆ ನೋಡಿ ಅವರೊಬ್ಬ ಕುಲೀನರೆಂಬ ಕಾರಣಕ್ಕೆ ಶ್ರೀಕೃಷ್ಣನ ದರ್ಶನಕ್ಕೆ ದೇವಸ್ಥಾನದ ಒಳಗೆ ಪ್ರವೇಶ ನಿರಾಕರಿಸಿದರು. ಆಗ ಕನಕದಾಸರು, ಶ್ರೀಕೃಷ್ಣನ ಗರ್ಭಗುಡಿ ಹಿಂಭಾಗಕ್ಕೆ ತೆರಳಿ ಹರಿಕೀರ್ತನೆ ಹೇಳುತ್ತಾ ನಿಂತಾಗ, ಗೋಡೆ ಬಿರುಕು ಬಿಟ್ಟು, ಶ್ರೀಕೃಷ್ಣನೇ ಪಶ್ಚಿಮಾಭಿಮುಖವಾಗಿ ತಿರುಗಿ, ಅವರಿಗೆ ದರ್ಶನ ನೀಡಿದನಂತೆ. ಈ ಕಥೆ, ಸಮಾಜದಲ್ಲಿನ ಮೇಲು ಕೀಳು ಎಂಬ ಅಸ್ಪೃಶ್ಯತೆಯ ಆಚರಣೆಗೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ.


ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಎರಡು ಕಾವ್ಯಗಳನ್ನು ರಚಿಸಿದ್ದಾರೆ. ಮೋಹನ ತರಂಗಿಣಿ (ಶೃಂಗಾರ ರಸಕಾವ್ಯ) ಮತ್ತು ನಳ ಚರಿತ್ರೆ (ನಳ - ದಮಯಂತಿಯರ ಪ್ರೇಮ ಕಾವ್ಯ) ಅವರ ಕಾವ್ಯಶಕ್ತಿಗೆ ಹಿಡಿದ ಕನ್ನಡಿಯಂತಿದೆ. ಹರಿಭಕ್ತ ಸಾರ (ಅನುಭಾವ ಲಘುಕಾವ್ಯ) ಮತ್ತು ರಾಮಧಾನ್ಯ ಚರಿತ್ರೆ (ಸಾಮಾಜಿಕ ಆಶಯವನ್ನೊಳಗೊಂಡ ಲಘುಕಾವ್ಯ) ಗಳು ಕನಕರ ವೈವಿಧ್ಯಮಯ ಮತ್ತು ಜನಪರ ನಿಲುವಿಗೆ ಸಾಕ್ಷಿಯಂತಿದೆ.


ಕನಕರ ಮುಂಡಿಗೆಗಳು, ಜಾನಪದೀಯ ಸೊಗಡಿನ ಪದಗಳು, ಭಾಮಿನಿ ಷಟ್ಪದಿಯ ಕಾವ್ಯ ಉಲ್ಲೇಖಾರ್ಹ. ಕನಕರು ತಮ್ಮ ಎರಡೂ ಕಾವ್ಯಗಳನ್ನು ಚೆನ್ನಿಗರಾಯ ಮತ್ತು ಕಾಗಿನೆಲೆ ಆದಿಕೇಶವನಿಗೆ ಅರ್ಪಿಸಿದ್ದಾರೆ. ತಮ್ಮ ಕೀರ್ತನೆ ಮತ್ತು ಪದಗಳ ಮೂಲಕ ನಾಡಿನ ಜನರ ನಾಲಿಗೆಯ ಮೇಲೆ ಇಂದಿಗೂ ನಲಿದಾಡುತ್ತಿದ್ದಾರೆ. ಕನಕದಾಸರು ಅಂದಿನ ಸಮಾಜ ವ್ಯವಸ್ಥೆಯಲ್ಲಿ ಅನುಭವಿಸಿದ ನೋವೇ ಅವರ ಕೀರ್ತನೆ ಹಾಗೂ ಪದಗಳಲ್ಲಿ ಹಾಡಾಗಿ ಹರಿದಿದೆ. ಜಾತಿ ವ್ಯವಸ್ಥೆಯನ್ನು ವಿರೋಧಿಸಿದಂತೆ ಕನಕರು ಜನರಲ್ಲಿ ತಮ್ಮ ಕೀರ್ತನೆಗಳ ಮೂಲಕ ಆಧ್ಯಾತ್ಮಿಕ, ಸಾಮಾಜಿಕ ಹಾಗೂ ವೈಚಾರಿಕ ಪ್ರಜ್ಞೆಯನ್ನು ಬಿತ್ತಿದ್ದಾರೆ. ಕನಕದಾಸರು ದಾಸ ಪಂಥದ ವಚನಕಾರರು ಮಾತ್ರವಲ್ಲ, ಎಲ್ಲ ಮತೀಯ ಬಂಧನಗಳಿಂದ ಪಾರಾಗಿ, ಸಾಮಾಜಿಕ ಕಟ್ಟುನಿಟ್ಟುಗಳಿಂದ ಮುಕ್ತರಾಗಿ, ಆಧ್ಯಾತ್ಮ ಸಿದ್ಧಿಯ ಶಿಖರನ್ನೇರಿದ ವಿಶ್ವಬಂಧು, ಸಂತ ಕವಿ.



ವಿಶ್ವಕರ್ಮ ಜಯಂತಿ

 ವಿಶ್ವಕರ್ಮ ಜಯಂತಿ





'ವಿಶ್ವ'ದ ವಾಸ್ತುಶಿಲ್ಪಿ 'ವಿಶ್ವ'ಕಮ೯:~


ವಿಶ್ವಕರ್ಮ ಜಯಂತಿ.


"ಆಡು ಮುಟ್ಟದ ಸೊಪ್ಪಿಲ್ಲ,
ವಿಶ್ವಕರ್ಮರು ಆವರಿಸದ ಕ್ಷೇತ್ರವಿಲ್ಲ,
ಅವರ ಪಾತ್ರವಿಲ್ಲದ ಕ್ಷೇತ್ರಗಳಿಲ್ಲ, ಜಾತ್ರೆಗಳಿಲ್ಲ."

ಸೃಷ್ಟಿಕತ೯ ಬ್ರಹ್ಮನಾದರೆ,
ಅವನ ವಂಶಸ್ಥನಾದ ವಿಶ್ವಕರ್ಮನು
ಇಡೀ ಸೃಷ್ಟಿಯ
ಕರಡು ಪ್ರತಿಯ ಪಿತಾಮಹ,
ಸೃಷ್ಟಿಯ ನೀಲನಕ್ಷೆ ತಯಾರಕ.
(Draftsman of the whole Universe).

ಇಂದು ನಾವೆಲ್ಲರೂ ಒಂದು ಅತ್ಯದ್ಭುತವಾದ ಸುಂದರ ಜಗತ್ತನ್ನು ನೋಡಲು ಸಾಧ್ಯವಾಗಿದೆ ಎಂದಾದರೆ ಅದು ವಿಶ್ವಕರ್ಮರ ಕಾಯ೯ತತ್ಪರತೆಯ ಫಲಿತಾಂಶದ ಪರಿಣಾಮವೇ ಹೊರತು ಬೇರೆ ಇನ್ನೇನಿಲ್ಲ.

ವಿಶ್ವಕಮ೯ ಎಂದರೆ ಸ್ವಗ೯ದ ಶಿಲ್ಪಿ. ಸಮುದ್ರಮಥನ ಕಾಲದಲ್ಲಿ ಹುಟ್ಟಿದ ಕಾಮಧೇನು, ಕಲ್ಪವೃಕ್ಷಗಳ ಹಾಗೆ 14 ಅತ್ಯಮೂಲ್ಯ ರತ್ನಗಳಲ್ಲಿ ವಿಶ್ವಕಮ೯ರೂ
ಒಬ್ಬರು.

"ವಿಶ್ವಕರ್ಮ ಎಂಬುವರು ವ್ಯಕ್ತಿಯಲ್ಲ ಅದೊಂದು ಅದ್ಭುತ, ಅದ್ವಿತೀಯ ದೈವ ಶಕ್ತಿ." ಎಂಬುದನ್ನು ಮರೆಯಬಾರದು

*ಋಗ್ವೇದದ ಪ್ರಕಾರ:

"ವಿಶ್ವಕರ್ಮರು ಇಡೀ ವಿಶ್ವದ ವಾಸ್ತುಶಿಲ್ಪಿ"
(Principal architecture of the universe, Devine engineer of the world.)

*ಮಹಾಭಾರತದ ಪ್ರಕಾರ:

"ಸಕಲ ಕಲೆಗಳನ್ನು ಕರಗತ ಮಾಡಿಕೊಂಡ ಕಲಾದೇವತೆಯೇ ವಿಶ್ವಕಮ೯"
(The Lord of the arts,executor of a thousand handicrafts, the carpenter of the God's, the most eminent of artisans, the fashioner of all ornaments and a great & immortal god.)

ವಿಶ್ವಕಮ೯ರ ಕಾಯಕಯೋಗ:

*ದೇವಾನುದೇವತೆಗಳಿಗೆ ಸುಂದರ ಅರಮನೆಗಳನ್ನು ನಿಮಿ೯ಸಿಕೊಟ್ಟ ಕೀತಿ೯.

*ಪಂಚಮವೇದ ಎಂದೇ ಕರೆಯಲ್ಪಡುವ
'ಸ್ಥಪತ್ಯವೇದ'ವನ್ನು ನೀಡಿದ ಮಹಾ ಮೇಧಾವಿ.
ಸ್ಥಪತ್ಯವೇದವು ಯಂತ್ರಶಾಸ್ತ್ರ ಹಾಗೂ ಶಿಲ್ಪಶಾಸ್ತ್ರದ ವಿಜ್ಞಾನವಾಗಿದೆ.
(The science of mechanics and architecture)

*ದೇವಾನುದೇವತೆಗಳ ಹಾರುವ ರಥಗಳ ವಿನ್ಯಾಸಕಾರ.

*ದೇವಾನುದೇವತೆಗಳಿಗೆ ಹಲವು ಯುಗಗಳಲ್ಲಿ ಹಲವಾರು ಸುಂದರ ನಗರ & ಪಟ್ಟಣಗಳನ್ನು ನಿಮಿ೯ಸಿದ ಕೀತಿ೯ ಇವರಿಗಿದೆ.
ಸತ್ಯಯುಗದಲ್ಲಿ-ಸ್ವಗ೯ದ ನಿಮಾ೯ಣ
ತ್ರೇತಾಯುಗದಲ್ಲಿ-ಲಂಕಾ ಪಟ್ಟಣ
ದ್ವಾಪರಯುಗದಲ್ಲಿ-ಶ್ರೀಕೃಷ್ಣನ ರಾಜಧಾನಿಯಾದ ದ್ವಾರಕಾ ಪಟ್ಟಣ ನಿಮಾ೯ಣ ಮಾಡಿದರು.

ಕೌರವರಿಗೆ ಹಸ್ತಿನಾಪುರ & ಪಾಂಡವರಿಗೆ ಇಂದ್ರಪ್ರಸ್ಥ ಎಂಬ ಸುಂದರ ನಗರಗಳ ನಿಮಾ೯ಣದ ಕೀತಿ೯ಯು ಇವರಿಗೆ ಸಲ್ಲುತ್ತದೆ.

ದೃಷ್ಟಾಂತ:

ವಿಶ್ವಕಮ೯ರ ಕಾಯ೯ದ ನೈಪುಣ್ಯತೆ ಹಾಗೂ ಕೌಶಲದ ಚಾಕಚಕ್ಯತೆ ಹೇಗಿದೆ ಎಂಬುದನ್ನು ಈ ದೃಷ್ಟಾಂತದ ಮೂಲಕ ತಿಳಿಯಬಹುದು.

ರಾಮಾಯಣದ ಪ್ರಕಾರ ಹೇಳುವಂತೆ
ತ್ರೇತಾಯುಗದಲ್ಲಿ ಶಿವನು ಪಾವ೯ತಿಯನ್ನು ಮದುವೆಯಾದ ಸಂದಭ೯ದಲ್ಲಿ, ಶಿವನು ತನ್ನ ಮಡದಿಯಾದ ಪಾವ೯ತಿಗಾಗಿ ಬಂಗಾರದ ಅರಮನೆಯನ್ನು ಉಡುಗೊರೆಯಾಗಿ ನೀಡಬೇಕೆಂದು ನಿಧ೯ರಿಸಿ,
ಬಂಗಾರದ ಅರಮನೆಯನ್ನು ನಿಮಿ೯ಸಿಕೊಡಬೇಕೆಂದು ವಿಶ್ವಕರ್ಮರಲ್ಲಿ ವಿನಂತಿಸಿದಾಗ ವಿಶ್ವಕರ್ಮರು ಅತ್ಯಂತ ವಿಧೇಯರಾಗಿ ಒಪ್ಪುತ್ತಾರೆ.

ಶಿವನು ಬಂಗಾರದ ಅರಮನೆಯ ನಿಮಾ೯ಣಕ್ಕೆ ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ನೀಡುತ್ತಾನೆ.

ಕೆಲವು ದಿನಗಳ ನಂತರ ವಿಶ್ವಕರ್ಮರು ಅತ್ಯಂತ ಸುಂದರ & ಭವ್ಯವಾದ ಸುವಣ೯ಸೌಧ (ಬಂಗಾರದ ಅರಮನೆ)ವನ್ನು ನಿಮಿ೯ಸುತ್ತಾರೆ.

ಈ ಭವ್ಯ ಅರಮನೆಯ ಗೃಹಪ್ರವೇಶಕ್ಕೆ
(House opening ceremony) ಶಿವನು ತನ್ನ ಗುರುಗಳಾದ
'ಪುಲಸ್ಯ ಮಹಷಿ೯'ಗಳನ್ನು ಆಹ್ವಾನಿಸುತ್ತಾನೆ
(ಪುಲಸ್ಯ ಮಹಷಿ೯ಗಳು ಕುಬೇರ & ರಾವಣರ ಅಜ್ಜ).

ಪುಲಸ್ಯ ಮಹಷಿ೯ಗಳು ಗೃಹಪ್ರವೇಶ ಕಾಯ೯(ಕ್ರಮ)ವನ್ನು ಪೂತಿ೯ಗೊಳಿಸಿದ ನಂತರ ಶಿವನು,
ತನ್ನ ಗುರುಗಳು ಗುರುಕಾಣಿಕೆಯಾಗಿ ಏನನ್ನಾದರೂ ಸ್ವೀಕರಿಸಬೇಕೆಂದು ಕೇಳಿಕೊಂಡಾಗ, ಗುರುಗಳಾದ ಪುಲಸ್ಯ ಮಹಷಿ೯ಗಳು ಆಗಲೇ ಆ ಅರಮನೆಯ ಸೌಂದರ್ಯಕ್ಕೆ, ಕಲಾಕೃತಿಗಳ ಸೂಕ್ಷ್ಮ ಕೆತ್ತನೆಗೆ ಮನಸೋತಿದ್ದರು. ಆ ಬಂಗಾರದ ಅರಮನೆಯು ಮಹಷಿ೯ಗಳ ಮೇಲೆ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ,
ಗುರುಗಳು ಯಾವ ಅರಮನೆಯ ಗೃಹಪ್ರವೇಶವನ್ನು ಮಾಡಿದ್ದರೋ ಅದೇ ಅರಮನೆಯನ್ನು ಗುರುಕಾಣಿಕೆಯಾಗಿ ಕೇಳುತ್ತಾರೆ!!.

ಆಗ ಶಿವನಿಗೆ ಆಶ್ಚರ್ಯದ ಜೊತೆಗೆ ವಿಶ್ವಕಮ೯ರ ಕಾಯ೯ಕೌಶಲ್ಯದ ಬಗ್ಗೆ ಹೆಮ್ಮೆ ಎನಿಸಿತು.

ಶಿವನು ತನ್ನ ಗುರುಗಳಿಗೆ ಅತ್ಯಂತ ವಿಧೇಯನಾಗಿ ಆ ಭವ್ಯ ಬಂಗಾರದ ಅರಮನೆಯನ್ನು ಗುರುಕಾಣಿಕೆಯಾಗಿ ನೀಡುತ್ತಾನೆ.

ಪುಲಸ್ಯ ಮಹಷಿ೯ಗಳು ಈ ಅರಮನೆಯನ್ನು ತನ್ನ ಪ್ರೀತಿಯ ಮೊಮ್ಮಗನಾದ ಕುಬೇರನಿಗೆ ಉಡುಗೊರೆಯಾಗಿ ನೀಡುತ್ತಾರೆ.

ಕಾಲಕ್ರಮೇಣ ರಾವಣನು ಕುಬೇರನನ್ನು ಸೋಲಿಸಿದಾಗ ಈ ಅರಮನೆಯು ರಾವಣನ ಕೈವಶವಾಗುತ್ತದೆ.
ಸುವಣ೯ಲಂಕೆಯು ಕಾಲಾನಂತರದಲ್ಲಿ ಶ್ರೀಲಂಕೆ ಎಂದಾಯಿತು.

ವಿಶ್ವಕರ್ಮರ 5 ಜನ ಮಕ್ಕಳು ಒಂದೊಂದು ವೃತ್ತಿಯನ್ನು ಆಯ್ದುಕೊಂಡು ಜೀವನ ನಡೆಸುತ್ತಿದ್ದರು. ಆ ಪಂಚಕಮ೯ರು ಯಾರೆಂದರೆ:

1.ಮನು - ಕಮ್ಮಾರ(Blacksmith)

2.ಮಾಯಾ - ಬಡಿಗ(Carpenter)

3.ತ್ವಸ್ತರ - ಕಂಚಗಾರ(Bellmetal worker)

4.ಶಿಲ್ಪಿ - ಶಿಲ್ಪಕಾರ(Stone Masons)

5.ವಿಶ್ವಜ್ಞ- ಅಕ್ಕಸಾಲಿಗ/ಪತ್ತಾರ(Goldsmith).

ಪಂಚಕಮ೯ರನ್ನು ಪಂಚ್ಯಾಳರು ಎಂದು, ಇವರನ್ನು ವಿಶ್ವಕರ್ಮದವರೆಂದು ಹಾಗೂ ವಿಶ್ವಬ್ರಾಹ್ಮಣರೆಂದೂ ಕರೆಯಲಾಯಿತು.

ಇಂದು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಸ್ಥಳಗಳು ಸೇರಿದಂತೆ ಭಾರತದ ಅಜಂತಾ,ಎಲ್ಲೋರಾ,ಖಜುರಾಹೋ,ಲಂಕಾ, ದ್ವಾರಕಾ, ನಳಂದಾ, ದೆಹಲಿಯ ಕುತುಬ್ ಮಿನಾರ, ಕೋನಾಕ೯ನ ಸೂಯ೯ದೇವಾಲಯ,
ಕನಾ೯ಟಕದ ಐಹೊಳೆ, ಹಂಪಿ, ಬದಾಮಿ, ಪಟ್ಟದಕಲ್ಲುಗಳಲ್ಲಿರುವ ಪ್ರವಾಸಿ ತಾಣಗಳು ವಿಶ್ವಕರ್ಮರ ಬೃಹತ್ ಕೊಡುಗೆಗಳಾಗಿವೆ.

ಇಂದು ಪ್ರತಿ ಗ್ರಾಮದ ಪ್ರತಿಯೊಂದು ಕಾಯ೯ಕ್ಕೂ ವಿಶ್ವಕಮ೯ರ ಅಗತ್ಯವಿದೆ.
ಆದ್ದರಿಂದ ಜಾತಿ, ಧಮ೯, ಪಂಗಡಗಳಿಗೆ ಅವರನ್ನು ಸೀಮಿತಗೊಳಿಸದೇ
ಸವ೯ರೂ ಅವರನ್ನು ಗೌರವಿಸೋಣ

ಮೌಲಾನಾ ಅಬ್ದುಲ್ ಕಲಾಂ ಅಜಾದ್ ಜಯಂತಿ

ಮೌಲಾನಾ ಅಬ್ದುಲ್ ಕಲಾಂ ಅ


ಜಾದ್ ಜಯಂತಿ

ವಿವಿಧತೆಯಲ್ಲಿ ಏಕತೆಯ ನೆಲೆಯಾದ ಭಾರತದಲ್ಲಿ ಹಿಂದೂ ಮುಸ್ಲಿಮರಿಬ್ಬರೂ ಸೌಹಾರ್ದತೆಯಿಂದ ಒಟ್ಟಿಗೆ ಬಾಳಬೇಕು. ಧರ್ಮಕ್ಕೂ, ಮನುಷ್ಯನು ಯಾವ ರಾಷ್ಟ್ರಕ್ಕೆ ಸೇರಿದವನು ಎಂಬುವುದಕ್ಕೂ ಯಾವುದೇ ಸಂಬಂಧವಿಲ್ಲವೆಂದು ನಂಬಿ ಆ ಆದರ್ಶಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದವರೇ ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌.

ದೇಶದ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಜನ್ಮದಿನವನ್ನೇ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ.

11 ನವೆಂಬರ್‌ 1888ರಲ್ಲಿ ಮೆಕ್ಕಾದಲ್ಲಿ ಜನಿಸಿದ ಮೌಲಾನಾ ಆಜಾದ್‌ರ ಪೂರ್ಣ ಹೆಸರು ಅಬ್ದುಲ್‌ ಕಲಾಂ ಘುಲಮ ಮಹಿಯುದ್ದಿನ್‌. ಇವರು ಅರೇಬಿಕ್‌, ಪರ್ಷಿಯನ್‌, ಉರ್ದು ಮತ್ತು ಇಸ್ಲಾಂ ತಾತ್ವಿಕ ಕ್ಷೇತ್ರದ ಮಹಾನ್‌ ವಿದ್ವಾಂಸರಾಗಿದ್ದರು. ಆಜಾದರ ತಂದೆ ತಾಯಿಗಳಿಬ್ಬರೂ ಅಸಾಧಾರಣ ವಿದ್ವಾಂಸರಾಗಿದ್ದವರು. ಇಸ್ಲಾಂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಆಜಾದರು ಚಿಕ್ಕ ವಯಸ್ಸಿನಲ್ಲಿಯೇ ಇಸ್ಲಾಂ ಧರ್ಮದ ಅಧ್ಯಯನವನ್ನು ಶ್ರದ್ಧೆಯಿಂದ ಮಾಡಿದ್ದರು. ಆಜಾದರಿಗೆ ಪತ್ರಿಕೋದ್ಯಮದಲ್ಲಿಯೂ ಹೆಚ್ಚಿನ ಆಸಕ್ತಿಯಿತ್ತು. ತಮ್ಮ 16ನೇ ವಯಸ್ಸಿನಲ್ಲಿಯೇ ಆಜಾದ್‌ ಎಂಬ ಅಂಕಿತ ನಾಮವನ್ನಿಟ್ಟುಕೊಂಡು ಪತ್ರಿಕಾ ಪ್ರಪಂಚಕ್ಕಿಳಿದು ಅಲ್‌ ಸಿದ್ವಾ ಎಂಬ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು.

ಮುಸ್ಲಿಮರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಒಂದು ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಪ್ರಮುಖ ಸಾಧನ. ಹೀಗಾಗಿ ಅವರು ಶಿಕ್ಷಣ ಪಡೆದು, ಮೂಢನಂಬಿಕೆಗಳನ್ನು ಮೆಟ್ಟಿ ಸಮಾಜದ ಸುಧಾರಣೆ ಮಾಡಿಕೊಳ್ಳಬೇಕು ಮತ್ತು ಮುಸ್ಲಿಂ ಸಮುದಾಯ ಮುಖ್ಯವಾಹಿನಿಗೆ ಬರಬೇಕು ಎನ್ನುವುದು ಆಜಾದರ ಹಂಬಲವಾಗಿತ್ತು.

ಪತ್ರಿಕಾ ಅಸ್ತ್ರಕ್ಕೆ ಬ್ರಿಟಿಷ್‌ ಕೊಕ್ಕೆ

ತಮ್ಮ 24ನೇ ವಯಸ್ಸಿನಲ್ಲಿ ಅಲ್‌ ಹಿಲಾಲ್‌ ಎಂಬ ಉರ್ದು ಪತ್ರಿಕೆಯನ್ನು ಆಜಾದ್‌ ಪ್ರಾರಂಭಿಸಿದರು. ಹಿಂದು-ಮುಸ್ಲಿಮರು ನಾವೆಲ್ಲರೂ ಒಂದು ಎಂಬ ಭಾವದಿಂದ ಸಹೋದರರಾಗಿ ಬಾಳಬೇಕು ಎಂಬುದು ಇವರ ಮೂಲ ಮಂತ್ರವಾಗಿತ್ತು. ಹಿಂದು-ಮುಸ್ಲಿಮರು ಒಂದಾದರೆ ತಾವು ಗಂಟುಮೂಟೆ ಕಟ್ಟಿಕೊಂಡು ಹೊರಡಬೇಕಾಗುತ್ತದೆಂದು ಬ್ರಿಟಿಷರಿಗೆ ಅರ್ಥವಾಯಿತು. ಅವರು ಈ ಒಗ್ಗಟ್ಟನ್ನು ಮುರಿಯಲು ಸರ್ವಪ್ರಯತ್ನಗಳನ್ನು ಮಾಡಿದರು. ಹಿಂದು-ಮುಸ್ಲಿಮರು ಅನ್ಯೋನ್ಯವಾಗಿ ಇರಬೇಕೆಂದು ಸಾರುತ್ತಿದ್ದ ಆಜಾದರು ಬ್ರಿಟಿಷ್‌ ಸರ್ಕಾರದ ಹಾದಿಯಲ್ಲಿ ಮುಳ್ಳಾದರು. ಬ್ರಿಟಿಷರ ಜನ ವಿರೋಧಿ ನೀತಿ, ಭಾರತೀಯ ನಾಗರಿಕರಿಗೆ ನೀಡುತ್ತಿರುವ ಕಿರುಕುಳ ಮುಂತಾದ ಕ್ರಾಂತಿಕಾರಿ ವಿಚಾರಗಳನ್ನು ಅಲ್‌ ಹಿಲಾಲ್‌ ವಾರಪತ್ರಿಕೆಯ ಮೂಲಕ ಜನರಿಗೆ ಮುಟ್ಟಿಸುತ್ತಿದ್ದರು. ಈ ಪತ್ರಿಕೆಯ 26000 ಪ್ರತಿಗಳು ಮಾರಾಟವಾಗುತ್ತಿದ್ದವು. ಇದರಿಂದ ಕೆಂಡಾಮಂಡಲವಾದ ಬ್ರಿಟಿಷ್‌ ಸರ್ಕಾರ 1914ರಲ್ಲಿ ಅಲ್‌ ಹಿಲಾಲ್‌ ಪತ್ರಿಕೆಯ ಮೇಲೆ ನಿಷೇಧ ಹೇರಿತು. ಇದರಿಂದ ವಿಚಲಿತರಾಗದ ಆಜಾದರು ಕೆಲವೇ ತಿಂಗಳಲ್ಲಿ ಅಲ್‌ ಬಲಾಘ… ಎನ್ನುವ ಮತ್ತೂಂದು ವಾರಪತ್ರಿಕೆಯನ್ನು ಪ್ರಾರಂಭಿಸಿ ಮೊದಲಿನಂತೆಯೇ ಬ್ರಿಟಿಷ್‌ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದರು. ಸರ್ಕಾರವು ಇವರಿಗೆ ರಾಂಚಿಯನ್ನು ಬಿಟ್ಟು ಹೊರಹೋಗಕೂಡದೆಂದು ನಿರ್ಬಂಧ ವಿಧಿಸಿತು.

ಬ್ರಿಟಿಷ್‌ ಸರ್ಕಾರ ಭಾರತದ ಆಡಳಿತದಲ್ಲಿ ಕೆಲವು ಸುಧಾರಣೆಗಳನ್ನು ಘೋಷಿಸಿತು. ಆದರೆ ಇವು ಏನೂ ಸಾಲದು ಹಾಗೂ ಜನಪರ ಸುಧಾರಣೆಗಳಲ್ಲ ಎಂದು ಆಜಾದರು ವಿರೋಧಿಸಿದರು. ಸರ್ಕಾರ ಮತ್ತೆ ಇವರನ್ನು ಒಂದು ವರ್ಷಕಾಲ ಸೆರೆಮನೆಯಲ್ಲಿ ಬಂಧಿಸಿಡುತ್ತದೆ. ಸದಾ ರಾಷ್ಟ್ರದ ಏಕತೆಯನ್ನು ಪ್ರತಿಪಾದಿಸುತ್ತಿದ್ದ ಆಜಾದರು ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದರು. 1942ರ ಭಾರತ ಬಿಟ್ಟು ತೊಲಗಿ ಚಳವಳಿ ಪ್ರಾರಂಭವಾಗುತ್ತಲೇ ಸರ್ಕಾರ ಇವರನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿತು. 1945ರಲ್ಲಿ ಕಾಂಗ್ರೆಸ್‌ ನಾಯಕರ ಬಿಡುಗಡೆಯಾಯಿತು. ಅಲ್ಲಿಂದ ಸುಮಾರು ಒಂದು ವರ್ಷ ಕಾಲ ಬ್ರಿಟಿಷ್‌ ಸರ್ಕಾರದೊಂದಿಗೆ ಮಾತುಕತೆಗಳಾದವು. ಆಗ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಆಜಾದರು ಹಿಂದು-ಮುಸ್ಲಿಮರ ಸ್ನೇಹದ ತಮ್ಮ ನೀತಿಯನ್ನು ಪ್ರತಿಪಾದಿಸಿದರು. ಪ್ರತ್ಯೇಕ ರಾಷ್ಟ್ರ ಪಾಕಿಸ್ತಾನದ ಬೇಡಿಕೆಯನ್ನಿಟ್ಟ ಮುಸ್ಲಿಮರೆಲ್ಲರೂ ಆಜಾದರನ್ನು ಮೂದಲಿಸಿದರು, ಅವಹೇಳನ ಮಾಡಿದರು. ಆದರೆ ಆಜಾದರು ಹಿಂದು-ಮುಸ್ಲಿಮರ ಏಕತೆಯ ತಮ್ಮ ದೃಢನಂಬಿಕೆಯನ್ನು ಬಿಟ್ಟುಕೊಡಲಿಲ್ಲ.

ದೇಶದ ಮೊದಲ ಶಿಕ್ಷಣ ಮಂತ್ರಿ

ಸ್ವತಂತ್ರ ಭಾರತದ ಜವಾಹರಲಾಲ್‌ ನೆಹರೂ ಮಂತ್ರಿ ಮಂಡಲದಲ್ಲಿ 1958ರ ಫೆಬ್ರುವರಿ 22ರವರೆಗೂ ಭಾರತ ಸರ್ಕಾರದ ಮೊಟ್ಟಮೊದಲ ವಿದ್ಯಾ ಮಂತ್ರಿಯಾಗಿ ಆಜಾದ್‌ ಕಾರ್ಯನಿರ್ವಹಿಸಿದರು. ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹಲವಾರು ಫ‌ಲಪ್ರದ ಯೋಜನೆಗಳನ್ನು ಜಾರಿಗೊಳಿಸಿದರು. ವೈಜಾnನಿಕ ಶಿಕ್ಷಣಕ್ಕೆ ಮಹತ್ವ ನೀಡಿದ್ದಲ್ಲದೆ, ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಿದರು. ಇಂದಿನ ವಿದ್ಯಾರ್ಥಿಗಳ ಪ್ರಥಮಾದ್ಯತೆಯ ಐಐಟಿ ಸಂಸ್ಥೆ ಹಾಗೂ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಸ್ಥಾಪನೆ ಮಾಡಿದ ಕೀರ್ತಿ ಆಜಾದರಿಗೆ ಸಲ್ಲುತ್ತದೆ. ಇವರ ಪ್ರಸಿದ್ಧ ಆತ್ಮಕಥನ "ಇಂಡಿಯಾ ವಿನ್ಸ್‌ ಫ್ರೀಡಂ' ಪ್ರಸಿದ್ಧಿಯ ಜೊತೆಗೆ ಚರ್ಚಾಸ್ಪದ ಕೃತಿಯಾಗಿದೆ. ಸರ್ಕಾರವು ಮೌಲಾನಾ ಆಜಾದ್‌ರ ಕೊಡುಗೆಗಳನ್ನು ಗಣಿಸಿ 1992ರಲ್ಲಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡಿ ಅವರ ಕೊಡುಗೆಗಳನ್ನು ಗೌರವಿಸಿದೆ.

ಆಜಾದ್‌ ಕನಸು ನನಸಾಗಿಸೋಣ

ರಾಷ್ಟ್ರಮಟ್ಟದಲ್ಲಿ ಈಗ ಶಿಕ್ಷಣ ಸಚಿವಾಲಯ ಇಲ್ಲ. ಅದೇ ಮಾನವ ಸಂಪನ್ಮೂಲ ಸಚಿವಾಲಯವಾಗಿದೆ. ಆಜಾದ್‌ರ ಕಾಲದಿಂದ ಇಲ್ಲಿಯವರಗೆ ದೇಶದ ಶಿಕ್ಷಣ ವ್ಯವಸ್ಥೆ ಹಲವು ಹಂತಗಳನ್ನು ದಾಟಿ ಮುಂದೆ ಬಂದಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಭಾರತ ಎಷ್ಟೇ ಸುಧಾರಿಸಿದೆ ಎಂದು ನಾವು ಹೇಳಿದರೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪದೋಷಗಳು ಇನ್ನೂ ಉಳಿದುಕೊಂಡಿವೆ. ಮುಖ್ಯವಾಗಿ, ಮಕ್ಕಳಿಗೆ ಬದುಕುವ ಶಿಕ್ಷಣವನ್ನು ನಾವು ನೀಡುತ್ತಿಲ್ಲ. ಉದ್ಯೋಗ ಗಿಟ್ಟಿಸಿಕೊಳ್ಳುವ ಶಿಕ್ಷಣವನ್ನಷ್ಟೇ ನೀಡುತ್ತಿದ್ದೇವೆ.

ಮೌಲಾನಾ ಅಬ್ದುಲ್‌ ಕಲಾಂ ಆಜಾದ್‌ರ ಜನ್ಮದಿನವನ್ನು ಶಿಕ್ಷಣ ದಿನವನ್ನಾಗಿ ಆಚರಿಸುವ ನಾವು ಇದನ್ನು ಕೇವಲ ಸಾಂಕೇತಿಕ ಆಚರಣೆಗಷ್ಟೇ ಸೀಮಿತಗೊಳಿಸಬಾರದು. ಹಾಗೆ ಮಾಡಿದರೆ ಅದು ಆಜಾದ್‌ ಅವರ ವ್ಯಕ್ತಿತ್ವಕ್ಕೆ ಎಸಗುವ ಅಪಚಾರ. ದೇಶದ ಶಿಕ್ಷಣ ಕ್ಷೇತ್ರಕ್ಕೆ ಆರಂಭಿಕ ದಿನಗಳಲ್ಲಿ ಭದ್ರ ಬುನಾದಿ ಹಾಕಿದ ಆಜಾದ್‌ ಜನಿಸಿ ಇಂದಿಗೆ 126 ವರ್ಷಗಳಾದವು. ಈಗಲೂ ನಾವು ಶೈಕ್ಷಣಿಕ ಸುಧಾರಣೆಯ ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು ನಿಜವಾದ ಶ್ರಮ ಹಾಕಿ ಶಿಕ್ಷಣ ವ್ಯವಸ್ಥೆಯನ್ನು ಮೇಲೆತ್ತುತ್ತಿಲ್ಲ ಎಂಬುದು ವಿಪರ್ಯಾಸ.

"ಶಿಕ್ಷಣವೆಂಬುದು ಎಲ್ಲರ ಆಜನ್ಮ ಸಿದ್ಧ ಹಕ್ಕು. ಅದನ್ನು ಪಡೆಯದೆ ವ್ಯಕ್ತಿಯೊಬ್ಬ ಪರಿಪೂರ್ಣ ಪ್ರಜೆಯಾಗಲಾರ' ಎಂದು 50 ವರ್ಷಗಳ ಹಿಂದೆಯೇ ಆಜಾದ್‌ ಹೇಳಿದ್ದರು. ಇಂದಿಗೂ ನಮ್ಮಲ್ಲಿ ಶಿಕ್ಷಣದಿಂದ ವಂಚಿತರಾಗುವ ಲಕ್ಷಾಂತರ ಮಕ್ಕಳಿದ್ದಾರೆ. ಭಾರತ ಬೆಳೆಯುತ್ತಿದೆ ಎಂದು ಹೇಳಿಕೊಳ್ಳುವ ನಾವು, ಪ್ರತಿಯೊಂದು ಮಗುವಿಗೂ ಕನಿಷ್ಠ ಶಿಕ್ಷಣ ಸಿಗುವಂತೆ ಮಾಡುವಲ್ಲಿ ಎಲ್ಲಿಯವರೆಗೆ ಯಶಸ್ವಿಯಾಗುವುದಿಲ್ಲವೋ ಅಲ್ಲಿಯವರೆಗೆ ಆಜಾದ್‌ರ ಕನಸು ನನಸಾಗದು.

ಮಾಹಿತಿ ಕೃಪೆ : ಉದಯವಾಣಿ